ADVERTISEMENT

ರಾಮನಗರ: ಚಿರತೆ ದಾಳಿ, ಮಹಿಳೆ ಸಾವು

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2021, 11:00 IST
Last Updated 30 ಅಕ್ಟೋಬರ್ 2021, 11:00 IST
   

ರಾಮನಗರ: ಮಾಗಡಿ ತಾಲ್ಲೂಕಿನ ಪಾಪಿರಂಗಯ್ಯನ ಪಾಳ್ಯದಲ್ಲಿ ಶನಿವಾರ ಚಿರತೆ ದಾಳಿಯಿಂದ ಮಹಾಲಕ್ಷ್ಮಮ್ಮ (38) ಮೃತಪಟ್ಟರು.

ಮಹಾಲಕ್ಷ್ಮಮ್ಮ ದನ ಮೇಯಿಸಲು ತೆರಳಿದ್ದ ವೇಳೆ ಪೊದೆಯಲ್ಲಿ ಅವಿತಿದ್ದ ಚಿರತೆ ದಾಳಿ ನಡೆಸಿತು. ಇದರಿಂದ ಅವರು ಸ್ಥಳದಲ್ಲೇ ಸಾವನ್ನಪ್ಪಿದರು.

ಘಟನೆ ಖಂಡಿಸಿ ಮಹಿಳೆಯರ ಸಂಬಂಧಿಕರು ಕುಣಿಗಲ್- ಮಾಗಡಿ ಮುಖ್ಯರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.