ಶಿವಮೊಗ್ಗ:ಮಲೆನಾಡ ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಭದ್ರಾ ಜಲಾಶಯ ಭರ್ತಿಯಾಗಿದ್ದು, ಭಾನುವಾರ ರಾತ್ರಿ ನೀರನ್ನು ಹೊರಬಿಡಲಾಯಿತು.ಭದ್ರಾ ಜಲಾಶಯದ ಗರಿಷ್ಠಮಟ್ಟ 186 ಅಡಿ. ಭಾನುವಾರ ಜಲಾಶಯದಿಂದ ನಾಲ್ಕು ಗೇಟ್ಗಳನ್ನು ತೆರೆಯುವ ಮೂಲಕ, 3 ಇಂಚು ಎತ್ತರದಲ್ಲಿ 1,700 ಕ್ಯೂಸೆಕ್ ನೀರು ಹೊರಬಿಡಲಾಯಿತು.
ಬೆಳಕಿನ ಮೋಹಕ...
ವಿದ್ಯುತ್ದೀಪ ಮಧ್ಯೆ ಜಲಾಶಯದ ಮನಮೋಹಕ ದೃಶ್ಯ ಎಲ್ಲರ ಮನಸೆಳೆಯಿತು.ಪ್ರಸಕ್ತ ವರ್ಷ ವಿವಿಧ ಬಣ್ಣಗಳಿಂದ ಕೂಡಿದ ವಿದ್ಯುತ್ ದೀಪಗಳಿಂದ ಜಲಧಾರೆಯನ್ನು ಕಂಗೋಳಿಸುವಂತೆ ಮಾಡಿದ್ದು ವಿಶೇಷವಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.