ADVERTISEMENT

ಆನವಟ್ಟಿ | ಶಬರಿಮಲೆ ಯಾತ್ರೆಗಳಲ್ಲಿಯೇ ಕಠಿಣವಾದ ಯಾತ್ರೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2024, 15:34 IST
Last Updated 17 ಏಪ್ರಿಲ್ 2024, 15:34 IST
ಆನವಟ್ಟಿ ಸಮೀಪದ ಜಡೆ ಹೋಬಳಿಯಲ್ಲಿ ಹಮ್ಮಿಕೊಂಡಿದ್ದ ಶಬರಿಮಲೆ ಇರುಮುಡಿ ತುಂಬುವ ಕಾರ್ಯಕ್ರಮದಲ್ಲಿ ಮಾಲೆ ಧರಿಸಿದ್ದ ಸ್ವಾಮಿಗಳು, ಗುರು ಸ್ವಾಮಿ ಈರಪ್ಪ ಅವರ ಚಿತ್ರವನ್ನು ಉಡುಗೊರೆಯಾಗಿ ನೀಡಿದರು
ಆನವಟ್ಟಿ ಸಮೀಪದ ಜಡೆ ಹೋಬಳಿಯಲ್ಲಿ ಹಮ್ಮಿಕೊಂಡಿದ್ದ ಶಬರಿಮಲೆ ಇರುಮುಡಿ ತುಂಬುವ ಕಾರ್ಯಕ್ರಮದಲ್ಲಿ ಮಾಲೆ ಧರಿಸಿದ್ದ ಸ್ವಾಮಿಗಳು, ಗುರು ಸ್ವಾಮಿ ಈರಪ್ಪ ಅವರ ಚಿತ್ರವನ್ನು ಉಡುಗೊರೆಯಾಗಿ ನೀಡಿದರು   

ಆನವಟ್ಟಿ: ದೇವರು ಎಂದರೆ ಅಚಲವಾದ ನಂಬಿಕೆ, ಆ ನಂಬಿಕೆ ಪ್ರಾಮಾಣಿಕವಾಗಿದ್ದಾಗ ಭಕ್ತರ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂದು ಶಬರೀಶ ಗುರು ಸ್ವಾಮೀಜಿ ಹೇಳಿದರು.

ಈಚೆಗೆ ಜಡೆ ಗ್ರಾಮದಲ್ಲಿ 38ನೇ ವರ್ಷದ ಶಬರಿಮಲೆ ಯಾತ್ರೆ ಕೈಗೊಂಡ ಈರಪ್ಪ ಗುರುಸ್ವಾಮಿ ಅವರ ಇರುಮುಡಿ ತುಂಬುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯಾತ್ರೆಗಳಲ್ಲಿಯೇ ಕಠಿಣವಾದುದು ಶಬರಿಮಲೆ ಯಾತ್ರೆ. ಇಂತಹ ಯಾತ್ರೆಯನ್ನ ಸತತವಾಗಿ ಪಾಲಿಸಿಕೊಂಡು ಬಂದಿರುವ ಈರಪ್ಪ ಗುರು ಸ್ವಾಮೀಜಿ ಅವರ ಶ್ರಮ ಸಾಕಷ್ಟಿದೆ. ಯಾತ್ರೆಗೆ ಈಗ ದೇಶ ವಿದೇಶಗಳಿಂದ ಸಹ ಭಕ್ತಾದಿಗಳು ಆಗಮಿಸುತ್ತಿದ್ದಾರೆ ಎಂದರು. 

ADVERTISEMENT

ಸಂತೋಷ್ ಗುರು ಸ್ವಾಮೀಜಿ ಚಗಟೂರು, ದೇಸಾಯಿ ಗೌಡ ಸೇರಿದಂತೆ ಅಯ್ಯಪ್ಪ ಸ್ವಾಮಿ ಭಕ್ತಾದಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.