ADVERTISEMENT

ಸಹಕಾರ ಸಂಘದ ಅಧ್ಯಕ್ಷರ ಮೇಲೆ ಹಲ್ಲೆ: ದೂರು

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2021, 3:19 IST
Last Updated 23 ಸೆಪ್ಟೆಂಬರ್ 2021, 3:19 IST
ಹಲ್ಲೆಗೊಳಗಾಗಿರುವ ಹೊಸನಗರ ತಾಲ್ಲೂಕಿನ ಸೊನಲೆ ಸಹಕಾರ ಸಂಘದ ಅಧ್ಯಕ್ಷ ಸುರೇಶ್ ಆಸ್ವತ್ರೆಗೆ ದಾಖಲಾಗಿರುವುದು.
ಹಲ್ಲೆಗೊಳಗಾಗಿರುವ ಹೊಸನಗರ ತಾಲ್ಲೂಕಿನ ಸೊನಲೆ ಸಹಕಾರ ಸಂಘದ ಅಧ್ಯಕ್ಷ ಸುರೇಶ್ ಆಸ್ವತ್ರೆಗೆ ದಾಖಲಾಗಿರುವುದು.   

ಹೊಸನಗರ: ಸೊನಲೆ ಸಹಕಾರ ಸಂಘದ ಅಧ್ಯಕ್ಷ ಸುರೇಶ್ ಮೇಲೆಗ್ರಾಮ ಪಂಚಾಯಿತಿ ಸದಸ್ಯಸತೀಶ್ ಅವರ ಬೆಂಬಲಿಗರು ಹಲ್ಲೆ ಮಾಡಿದ್ದಾರೆ ಎಂದು ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

‘ಸೊನಲೆ ಗ್ರಾಮ ಪಂಚಾಯಿತಿ ಸದಸ್ಯ ಸತೀಶ್ (ತಟ್ಟಿ) ಚುನಾವಣೆ ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿ ಸ್ವರ್ಧಿಸಿ ಗೆದ್ದಿದ್ದಾರೆ.
ಅವರ ಸದಸ್ಯತ್ವವನ್ನು ರದ್ದುಪಡಿಸಬೇಕು ಎಂದು ಚುನಾವಣೆ ಆಯೋಗಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಇದರಿಂದಕೋಪಗೊಂಡ ಸತೀಶ್ ಹಾಗೂ ಅವರ ಬೆಂಬಲಿಗರಾದ ಪ್ರಕಾಶ್ ಶೆಟ್ಟಿ, ಪ್ರವೀಣ ಶೆಟ್ಟಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ’ ಎಂದು ದೂರು ನೀಡಿದ್ದಾರೆ.

‘ಸತೀಶ ಗುತ್ತಿಗೆದಾರರಾಗಿದ್ದು, ಚುನಾವಣೆಗೆ ಸ್ವರ್ಧಿಸುವಾಗ ಚುನಾವಣೆಯ ಆಯೋಗಕ್ಕೆ ಗುತ್ತಿಗೆಗಳ ಲೆಕ್ಕ ನೀಡಿರಲಿಲ್ಲ. ಈ ಎಲ್ಲ ಕಾಮಗಾರಿಯ ಹಣ ಅವರ ಖಾತೆಗೆ ಜಮಾವಾಗಿದೆ. ಒಬ್ಬ ಗ್ರಾಮ ಪಂಚಾಯಿತಿಯ ಸದಸ್ಯರಾಗಿ ಚುನಾವಣೆಯ ಆಯೋಗಕ್ಕೆ ಬಾಕಿ ತೋರಿಸದೆ ಬ್ಯಾಂಕಿನ ಖಾತೆಗೆ ಜಮಾವಾಗಿರುವುದನ್ನು ಪ್ರಶ್ನಿಸಿ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿತ್ತು’ ಎಂದು ಅವರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.