ADVERTISEMENT

ಶಿರಾಳಕೊಪ್ಪ: ಬೈಕ್ ಸಮೇತ ಕಳ್ಳನ ಬಂಧನ

​ಪ್ರಜಾವಾಣಿ ವಾರ್ತೆ
Published 16 ಮೇ 2025, 15:56 IST
Last Updated 16 ಮೇ 2025, 15:56 IST
ಶಿರಾಳಕೊಪ್ಪದಲ್ಲಿ ವಶಪಡಿಸಿಕೊಂಡ ಬೈಕ್ ಜೊತೆ ಪೊಲೀಸರು
ಶಿರಾಳಕೊಪ್ಪದಲ್ಲಿ ವಶಪಡಿಸಿಕೊಂಡ ಬೈಕ್ ಜೊತೆ ಪೊಲೀಸರು   

ಶಿವಮೊಗ್ಗ: ಬೈಕ್ ಕಳ್ಳತನದ ಆರೋಪದ ಮೇಲೆ ಆನವಟ್ಟಿಯ ಆಜಾದ್ ನಗರ ನಿವಾಸಿ ಅಬ್ದುಲ್ ಖಾದರ್ ಅಲಿಯಾಸ್ ಸಮೀರ್ (20) ಎಂಬುವನನ್ನು ಶಿರಾಳಕೊಪ್ಪ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಶಿರಾಳಕೊಪ್ಪ ಪಟ್ಟಣದ ಮಠದಗದ್ದೆ ನಿವಾಸಿ ಇನಾಯತ್‌ವುಲ್ಲಾ ಅವರು ಕಳೆದ ಫೆ. 21ರಂದು ತಮ್ಮ ಬೈಕನ್ನು ಆನವಟ್ಟಿಗೆ ಹೋಗುವ ರಸ್ತೆಯ ಬದಿಯಲ್ಲಿ ನಿಲ್ಲಿಸಿ ಕಾರ್ಯನಿಮಿತ್ತ ತೆರಳಿದ್ದರು. ಈ ವೇಳೆ ಬೈಕ್ ಕಳ್ಳತನವಾಗಿತ್ತು.

ಇನಾಯತ್‌ವುಲ್ಲಾ ಆ ಬಗ್ಗೆ ಶಿರಾಳಕೊಪ್ಪ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ₹30,000 ಮೌಲ್ಯದ ಬೈಕ್ ವಶಪಡಿಸಿಕೊಂಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.