ADVERTISEMENT

ಸಹೋದರರ ಕಲಹ: ಕೊಲೆ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2021, 8:05 IST
Last Updated 21 ಅಕ್ಟೋಬರ್ 2021, 8:05 IST
   

ಸಾಗರ: ತಾಲ್ಲೂಕಿನ ಅಂದಾಸುರ ಗ್ರಾಮದಲ್ಲಿ ಸಹೋದರರ ನಡುವೆ ಕ್ಷುಲ್ಲಕ ವಿಚಾರಕ್ಕೆ ಜಗಳ ನಡೆದು ಸುರೇಶ್ (24) ಎಂಬ ವ್ಯಕ್ತಿ ಮೃತಪಟ್ಟ ಪ್ರಕರಣದಲ್ಲಿ ಆತನ ಸಹೋದರ ಗಿರೀಶ್ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ಮೇ 6ರಂದು ಸಹೋದರರ ನಡುವೆ ನಡೆದ ಕಲಹದಲ್ಲಿ ಸುರೇಶ್ ವಿಷ ಸೇವಿಸಿದ್ದರು. ಅಲ್ಲದೇ ಗಿರೀಶ್ ಅವರು ಸುರೇಶ್ ಮೇಲೆ ರಾಡ್‌ನಿಂದ ಹಲ್ಲೆ ಕೂಡ ನಡೆಸಿದ್ದರು. ಯಾವ ಕಾರಣಕ್ಕೆ ಸುರೇಶ್ ಅವರ ಸಾವು ಸಂಭವಿಸಿದೆ ಎನ್ನುವ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದರು.

ತನಿಖೆ ಸಂದರ್ಭದಲ್ಲಿ ಸುರೇಶ್ ಅವರು ಗಿರೀಶ್ ನಡೆಸಿದ ಹಲ್ಲೆಯಿಂದಲೇ ಸಾವನ್ನಪ್ಪಿರುವುದು ದೃಢಪಟ್ಟಿರುವುದರಿಂದ ಪೊಲೀಸರು ಗಿರೀಶ್ ವಿರುದ್ಧ ಪ್ರಕರಣ ದಾಖಲಿಸಿದ್ದು, ಅವರನ್ನು ಬಂಧಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.