ADVERTISEMENT

ಬೆಂಗಳೂರಿಗೆ ತೆರಳುತ್ತಿದ್ದ ಡಿ.ಎಸ್.ಅರುಣ್ ಕಾರು ಅಪಘಾತ

​ಪ್ರಜಾವಾಣಿ ವಾರ್ತೆ
Published 23 ಜುಲೈ 2020, 11:45 IST
Last Updated 23 ಜುಲೈ 2020, 11:45 IST
ಡಿ.ಎಸ್‌.ಅರುಣ್
ಡಿ.ಎಸ್‌.ಅರುಣ್   

ಶಿವಮೊಗ್ಗ:ಮುಖ್ಯಮಂತ್ರಿ ಭೇಟಿಗೆಬೆಂಗಳೂರಿಗೆ ತೆರಳುತ್ತಿದ್ದ ರಾಜ್ಯ ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷಡಿ.ಎಸ್. ಅರುಣ್ ಅವರ ಕಾರು ಶಿರಾ ಬಳಿ ಅಪಘಾತವಾಗಿದೆ. ಅವರಿಗೆ ಯಾವುದೇ ಅಪಾಯವಾಗಿಲ್ಲ.

ಕಾರಿನಲ್ಲಿ ಅರುಣ್ಜತೆಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಸುದೇವ್‌, ಮಾಜಿ ಆಧ್ಯಕ್ಷ ಡಿ.ಬಿ. ಶಂಕರಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ತಮ್ಮಡಿಹಳ್ಳಿ ನಾಗರಾಜ್‌ ಇದ್ದರು. ಅಪಘಾತದಿಂದ ಕಾರು ಜಖಂಗೊಂಡಿದೆ.

ಎಂಪಿಎಂಸಿ ಮಾರುಕಟ್ಟೆ ಶುಲ್ಕ(ಸೆಸ್‌) ರದ್ದು ಮಾಡುವ ಕುರಿತುಯಡಿಯೂರಪ್ಪ ಅವರಜತೆ ಚರ್ಚಿಸಲುಬೆಂಗಳೂರು ಹೊರಟಿದ್ದೆವು. ‘ಎದುರಿಗೆ ಬಂದ ಬೈಕ್‌ ತಪ್ಪಿಸಲು ಹೋಗಿ ಅಪಘಾತವಾಗಿದೆ. ಬದಲಿ ಕಾರಿನಲ್ಲಿಎಲ್ಲರೂ ಕ್ಷೇಮವಾಗಿ ಬೆಂಗಳೂರಿಗೆ ತಲುಪಿದ್ದೇವೆ’ ಅರುಣ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.