ADVERTISEMENT

ವಿದ್ಯುತ್ ಶುಲ್ಕ ಮನ್ನಾಕ್ಕೆ ಕಾಂಗ್ರೆಸ್ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಮೇ 2020, 11:28 IST
Last Updated 7 ಮೇ 2020, 11:28 IST
ಶಿವಮೊಗ್ಗದಲ್ಲಿ ಗುರುವಾರ  ಕೆಪಿಸಿಸಿ ಕಾರ್ಯದರ್ಶಿ ಕೆ.ದೇವೇಂದ್ರಪ್ಪ ನೇತೃತ್ವದಲ್ಲಿ ಕಾರ್ಯಕರ್ತರು ಮೂರು ತಿಂಗಳು ವಿದ್ಯುತ್ ಶುಲ್ಕ ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ಮೆಸ್ಕಾಂ ಎಂಜಿನಿಯರ್‌ಗೆ ಮನವಿ ಸಲ್ಲಿಸಿದರು.
ಶಿವಮೊಗ್ಗದಲ್ಲಿ ಗುರುವಾರ  ಕೆಪಿಸಿಸಿ ಕಾರ್ಯದರ್ಶಿ ಕೆ.ದೇವೇಂದ್ರಪ್ಪ ನೇತೃತ್ವದಲ್ಲಿ ಕಾರ್ಯಕರ್ತರು ಮೂರು ತಿಂಗಳು ವಿದ್ಯುತ್ ಶುಲ್ಕ ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ಮೆಸ್ಕಾಂ ಎಂಜಿನಿಯರ್‌ಗೆ ಮನವಿ ಸಲ್ಲಿಸಿದರು.   

ಶಿವಮೊಗ್ಗ: ಬಡ, ಮಧ್ಯಮ ವರ್ಗದ ಜನರಿಗೆ ಮೂರು ತಿಂಗಳು ವಿದ್ಯುತ್ಶುಲ್ಕಮನ್ನಾ ಮಾಡಬೇಕು ಎಂದುಒತ್ತಾಯಿಸಿ ಕೆಪಿಸಿಸಿ ಕಾರ್ಯದರ್ಶಿ ಕೆ.ದೇವೇಂದ್ರಪ್ಪ ನೇತೃತ್ವದಲ್ಲಿ ಕಾರ್ಯಕರ್ತರು ಗುರುವಾರಮೆಸ್ಕಾಂಎಂಜಿನಿಯರ್‌ಗೆ ಮನವಿ ಸಲ್ಲಿಸಿದರು.

ಗೃಹ ಬಳಕೆಯ ಎಲ್ಲ ಮೂರು ತಿಂಗಳ ವಿದ್ಯುತ್ ಶುಲ್ಕ ರದ್ದು ಮಾಡಬೇಕು. ಜನರುದುಡಿಮೆ ಇಲ್ಲದೇ ಸಂಕಷ್ಟದಲ್ಲಿದ್ದಾರೆ. ಕೆಲಸ ಕಾರ್ಯ ಇಲ್ಲ.ರೈತರು, ಕೂಲಿಕಾರ್ಮಿಕರು, ವಾಹನ ಚಾಲಕರು, ಪ್ರತಿ ವರ್ಗದವರೂನಷ್ಟ ಅನುಭವಿಸುತ್ತಿದ್ದಾರೆ.ಊಟಕ್ಕೂ ಪರಡಾಡುವ ಪರಿಸ್ಥಿತಿಯಲ್ಲಿ ಕಡುಬಡವರಿದ್ದಾರೆ. ಬಡವರುಸರ್ಕಾರವಿತರಿಸುವಅಕ್ಕಿ ಬಳಸುತ್ತಿದ್ದಾರೆ.ಮಧ್ಯಮ ವರ್ಗ ನೆರವಿಲ್ಲದೇ, ದುಡಿಮೆಯೂ ಇಲ್ಲದೇ ಹಸಿವಿನಿಂದ ಬಳಲುತ್ತಿದೆ ಎಂದು ಚಿತ್ರಣ ಬಿಚ್ಚಿಟ್ಟರು.

ಲೇವಾದೇವಿದಾರರು ಸಾಲ ಕಟ್ಟಲು ಒತ್ತಾಯಿಸಬಾರದು. ಮನೆ ಬಾಡಿಗೆ ಕೊಡುವಂತೆ ಮಾಲೀಕರು ಬಲವಂತ ಮಾಡಬಾರದು. ವಿದ್ಯುತ್ ಶುಲ್ಕವತಿಸದಿದ್ದರೆ ಕ್ರಮ ಕೈಗೊಳ್ಳುವುದಾಗಿ,ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಬೆದರಿಸುತ್ತಿದ್ದಾರೆ. ಹಾಗಾಗಿ, ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಮುಕಂಡರಾದಕವಿತಾ, ಸಂತೋಷ್, ಅರ್ಜುನ್, ರಾಘವೇಂದ್ರ ಮನವಿ ಸಲ್ಲಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.