ADVERTISEMENT

ದೇವಸ್ಥಾನ, ಮನೆ ಬೀಗ ಮುರಿದು ಕಳವು

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2019, 14:23 IST
Last Updated 9 ಫೆಬ್ರುವರಿ 2019, 14:23 IST

ಶಿವಮೊಗ್ಗ: ವಿನೋಬನಗರದ ಪಾರ್ಕ್‌ ಬಡಾವಣೆಯ ಆಂಜನೇಯ ದೇವಸ್ಥಾನದಲ್ಲಿ ಶುಕ್ರವಾರ ರಾತ್ರಿ ದೇವಾಲಯದ ಬೀಗ ಮುರಿದು ಹುಂಡಿ ಹಣ ಕಳವು ಮಾಡಲಾಗಿದೆ.

ಅಂದಾಜು 10ಸಾವಿರ ಇರಬಹುದು ಎಂದು ದೇವಸ್ಥಾನದ ಆಡಳಿತ ಮಂಡಳಿ ಅಂದಾಜಿಸಿದೆ. ಹಿಂದೆಯೂ ಇದೇ ದೇವಸ್ಥಾನದಲ್ಲಿ ಕಳುವಾಗಿತ್ತು. ಆದರೆ, ದೇವರ ಮೇಲಿನ ಬೆಳ್ಳಿ ಆಭರಣಗಳು ಕಳುವಾಗಿಲ್ಲ.

₨ 7.5 ಲಕ್ಷ ಕಳವು:

ADVERTISEMENT

ದೇವರಾಜ ಅರಸ್ ಬಡಾವಣೆಯ ಸಿವಿಲ್ ಎಂಜಿನಿಯರ್ ಅರುಣ್‌ ಅವರ ಮನೆಯಲ್ಲಿ ಶುಕ್ರವಾರ ರಾತ್ರಿ ಕಳವು ಮಾಡಲಾಗಿದೆ.

ಬೀಗ ಮುರಿದು ಮನೆಯಲ್ಲಿದ್ದ ಸುಮಾರು ₨ 7.5 ಲಕ್ಷ ನಗದು ದೋಚಿದ್ದಾರೆ. ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.