ADVERTISEMENT

ಬಿಜೆಪಿ ಮುಖಂಡನ ಕೊಲೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2020, 14:44 IST
Last Updated 10 ಫೆಬ್ರುವರಿ 2020, 14:44 IST

ಶಿವಮೊಗ್ಗ: ಬಿಜೆಪಿ ನಗರ ಘಟಕದ ಉಪಾಧ್ಯಕ್ಷ ನಾಗರಾಜ್(50)ಅವರನ್ನು ಭಾನುವಾರ ತಡರಾತ್ರಿ ಕೊಲೆ ಮಾಡಲಾಗಿದೆ.

ಕೊಲೆ ಪ್ರಕರಣ ಬೆಳಕಿಗೆ ಬಂದ ಕೆಲವೇ ತಾಸುಗಳಲ್ಲಿ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಆರೋಪಿಗಳೆಂದು ಶಂಕಿಸಲಾದಭದ್ರಾವತಿ ಜೇಡಿಕಟ್ಟೆಯ ರಾಘು, ರಾಘವೇಂದ್ರಅವರನ್ನು ವಶಕ್ಕೆ ಪಡೆದಿದ್ದಾರೆ.

ನಾಗರಾಜ ರಾಗಿಗುಡ್ಡ ನಿವಾಸಿ. ರಾತ್ರಿ 8.30ರ ಸುಮಾರಿಗೆ ಮನೆಯಿಂದ ಹೊರಗೆ ಹೋದವರನ್ನು ಮಚ್ಚುಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ರಾಗಿಗುಡ್ಡ ಸಮೀಪದ ಕುವೆಂಪು ಬಡಾವಣೆಯಲ್ಲಿ ಶವ ದೊರೆತ್ತಿತ್ತು. ಆತನ ಬಳಿ ಇದ್ದ ಬೈಕ್‌, ಮೊಬೈಲ್‌ನಿಂದ ಶವದ ಗುರುತು ಪತ್ತೆಯಾಗಿತ್ತು.

ADVERTISEMENT

ಶಂಕಿತ ಆರೋಪಿಗಳು ಹಾಗೂ ಕೊಲೆಯಾದ ನಾಗರಾಜ್ ಮಧ್ಯೆ ಹಣಕಾಸಿನ ವ್ಯವಹಾರವಿದ್ದು, ಇದು ಕೊಲೆಗೆ ಕಾರಣವಿರಬಹುದುಎಂದು ಪೊಲೀಸರುಶಂಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.