ADVERTISEMENT

ತರಕಾರಿ ಮಾರುಕಟ್ಟೆಯಲ್ಲಿ ಮೊಬೈಲ್‌ಗಳ ಕಳವು

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2020, 14:10 IST
Last Updated 4 ಏಪ್ರಿಲ್ 2020, 14:10 IST

ಶಿವಮೊಗ್ಗ: ಎಪಿಎಂಸಿ ಮಾರುಕಟ್ಟೆ ಬಳಿ ತರಕಾರಿ ಖರೀದಿಸಲು ಬಂದ ಹಲವು ಗ್ರಾಹಕರ ಮೊಬೈಲ್ ಎಗರಿಸುವ ಕಾರ್ಯ ಅವ್ಯಾಹತವಾಗಿ ಮುಂದುವರಿದೆ. ಶುಕ್ರವಾರವೂ ಐದು ಜನರು ಮೊಬೈಲ್‌ ಕಳೆದುಕೊಂಡಿದ್ದಾರೆ.

ಚಿಲ್ಲರೆ ವ್ಯಾಪಾರಿಗಳು ಮಾರುಕಟ್ಟೆ ಎದುಗಿರುವ 100 ಅಡಿ ರಸ್ತೆಯ ಬದಿಯಲ್ಲೇ ಬೆಳಗ್ಗೆ 6 ರಿಂದ 9 ರವರೆಗೆ ತರಕಾರಿ ಮಾರಾಟ ಮಾಡುತ್ತಿದ್ದಾರೆ. ತರಕಾರಿ ಖರೀದಿಗೆ ಹೆಚ್ಚಿನಜನ ಸಂದಣಿ ಇರುತ್ತದೆ. ಈ ಸಮಯದಲ್ಲಿ ಕಳ್ಳರು ಕೈಚಳಕ ಪ್ರದರ್ಶಿಸುತ್ತಿದ್ದಾರೆ. ವಾರದಲ್ಲಿ ಎಂಟು ದೂರುಗಳು ದಾಖಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT