ADVERTISEMENT

ಅಸಲು ಪಾವತಿಸಿದರೆ ಬಡ್ಡಿ ಮನ್ನಾ: ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ ಗೌಡ

ಮಾರ್ಚ್‌ 31 ಕೊನೆಯ ದಿನ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 11:09 IST
Last Updated 18 ಫೆಬ್ರುವರಿ 2020, 11:09 IST
ಆರ್.ಎಂ.ಮಂಜುನಾಥ ಗೌಡ
ಆರ್.ಎಂ.ಮಂಜುನಾಥ ಗೌಡ   

ಶಿವಮೊಗ್ಗ: ಪ್ರಸಕ್ತ ವರ್ಷ ಜ.31ಕ್ಕೆ ಸುಸ್ತಿಯಾಗಿರುವ ಕೃಷಿ ಸಾಲಗಳ ಬಡ್ಡಿ ಸಂಪೂರ್ಣ ಮನ್ನ ಮಾಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಜಿಲ್ಲೆಯ ರೈತರು ಬಾಕಿ ಅಸಲು ಪಾವತಿಸುವ ಮೂಲಕ ಬಡ್ಡಿಮನ್ನಾ ಪ್ರಯೋಜನ ಪಡೆಯಬೇಕು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡಕೋರಿದರು.

ಡಿಸಿಸಿ ಹಾಗೂ ಪೀಕಾರ್ಡ್ ಬ್ಯಾಂಕ್‌ನಲ್ಲಿ ಸಾಲ ಪಡೆದು ಸುಸ್ತಿಯಾಗಿರುವ ರೈತರಿಗೆ ಈ ಯೋಜನೆ ಅನ್ವಯಿಸುತ್ತದೆ. ಪಬಡ್ಡಿ ಮನ್ನಾ ಪ್ರಯೋಜನ ಪಡೆಯುವ ರೈತರು ಮಾರ್ಚ್ 31ರ ಒಳಗೆ ಅಸಲು ಪಾವತಿಸಬೇಕು ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 165 ಪ್ರಾಥಮಿಕ ಸಹಕಾರ ಸಂಘಗಳಿವೆ. 8 ಡಿಸಿಸಿ ಬ್ಯಾಂಕ್ ಶಾಖೆಗಳಿವೆ. ಸುಮಾರು 728 ಸದಸ್ಯರ ಸಾಲ ಸುಸ್ತಿಯಾಗಿದೆ. ಪೀಕಾರ್ಡ್ ಬ್ಯಾಂಕ್‌ನಲ್ಲಿ 12,500 ಸದಸ್ಯರು ದೀರ್ಘಾವಧಿಸಾಲ ಪಡೆದಿದ್ದಾರೆ. ₨ 124 ಕೋಟಿ ಅಸಲು ಇದೆ. ಡಿಸಿಸಿ ಬ್ಯಾಂಕ್‌ನಲ್ಲಿ ಪಡೆದ 6079 ರೈತರ ಸಾಲ 30.15 ಕೋಟಿ ಇದೆ. ಅಸಲಿಗಿಂತ ಬಡ್ಡಿಯೇ ₨ 31.60 ಕೋಟಿ ಯಾಗಿದೆ. ಡಿಸಿಸಿ ಬ್ಯಾಂಕ್‌ನ ಮಧ್ಯಮಾವಧಿ ಸಾಲದ ಪ್ರಯೋಜನ13,228 ರೈತರಿಗೆ ದೊರಕಲಿದೆ ಎಂದರು.

ADVERTISEMENT

ಡಿಸಿಸಿ ಬ್ಯಾಂಕ್‌ ಜ.31ರವರೆಗೆ 63,008 ರೈತರಿಗೆ ₨ 330 ಕೋಟಿ ಸಾಲ ನೀಡಿದೆ.ಮಾರ್ಚ್ ಅಂತ್ಯದವರೆಗೆ ಇನ್ನಷ್ಟು ಸಾಲ ನೀಡುವ ಗುರಿ ಹೊಂದಲಾಗಿದೆ ಎಂದು ವಿವರ ನೀಡಿದರು.

ನಿಯಮದ ಅನ್ವಯ ನೇಮಕ:

ನಬಾರ್ಡ್ ನಿಯಮದ ಪ್ರಕಾರವೇ ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಕ ಮಾಡಲಾಗಿದೆ.ಸಹಕಾರ ಇಲಾಖೆ ಜಿಲ್ಲಾ ಪಂಚಾಯತಿಗೆತಪ್ಪುಮಾಹಿತಿ ನೀಡಿದೆ. ನಿಯಮಬಿಟ್ಟು ಸಿಬ್ಬಂದಿ ನೇಮಕ ಮಾಡಿಕೊಂಡಿಲ್ಲ.ಇತರೆ ಹುದ್ದೆಗಳ ಭರ್ತಿಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಚನ್ನವೀರಪ್ಪ, ನಿರ್ದೇಶಕರಾದದುಗ್ಗಪ್ಪಗೌಡ, ಸುಧೀರ್, ಬಿ.ಡಿ.ಭೂಕಾಂತ್, ಎಸ್.ಪಿ.ದಿನೇಶ್, ಎಚ್‌.ಎಲ್.ಷಡಾಕ್ಷರಿ, ವ್ಯವಸ್ಥಾಪಕ ನಿರ್ದೇಶಕ ರಾಜಣ್ಣ ರೆಡ್ಡಿಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.