ADVERTISEMENT

ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪಿಸಲು ಆಗ್ರಹ

ದೇವಾಂಗ ನೇಕಾರ ಯುವ ವೇದಿಕೆಯಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2020, 16:32 IST
Last Updated 27 ನವೆಂಬರ್ 2020, 16:32 IST
ದೇವಾಂಗ ನೇಕಾರ ಯುವ ವೇದಿಕೆಯಿಂದ ಶುಕ್ರವಾರ ಶಿವಮೊಗ್ಗ ಜಿಲ್ಲಾಧಿಕಾರಿ ಎದುರು ಪ್ರತಿಭಟನೆ ನಡೆಸಲಾಯಿತು
ದೇವಾಂಗ ನೇಕಾರ ಯುವ ವೇದಿಕೆಯಿಂದ ಶುಕ್ರವಾರ ಶಿವಮೊಗ್ಗ ಜಿಲ್ಲಾಧಿಕಾರಿ ಎದುರು ಪ್ರತಿಭಟನೆ ನಡೆಸಲಾಯಿತು   

ಶಿವಮೊಗ್ಗ: ಹಿಂದುಳಿದಿರುವ ದೇವಾಂಗ ಸಮಾಜದ ಅಭಿವೃದ್ಧಿಗಾಗಿ ಸರ್ಕಾರ ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ದೇವಾಂಗ ನೇಕಾರ ಯುವ ವೇದಿಕೆಯಿಂದ ಶುಕ್ರವಾರ ಜಿಲ್ಲಾಧಿಕಾರಿ ಎದುರು ಪ್ರತಿಭಟನೆ ನಡೆಸಲಾಯಿತು.

ದೇವಾಂಗ ಸಮಾಜ ಹಿಂದುಳಿದ ಸಮುದಾಯವಾಗಿದ್ದು, ಸರ್ವತೋಮುಖ ಬೆಳವಣಿಗೆಗಾಗಿ ದೇವಾಂಗ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಮಾಡುವ ಅಗತ್ಯವಿದೆ. ರಾಜ್ಯ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ರಾಜ್ಯದಲ್ಲಿ 20 ಲಕ್ಷ ದೇವಾಂಗ ಜನಾಂಗದವರಿದ್ದಾರೆ. ನೇಕಾರಿಕೆ ಮೂಲವೃತ್ತಿಯನ್ನಾಗಿಸಿಕೊಂಡಿದ್ದಾರೆ. ಇಂದಿನ ದಿನಗಳಲ್ಲಿ ನೇಕಾರಿಕೆ ಮುಂದುವರಿಸಿಕೊಂಡು ಹೋಗುವುದೇ ಕಷ್ಟವಾಗುತ್ತಿದೆ. ಸಮುದಾಯದ ಜನರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಶಿಕ್ಷಣ, ರಾಜಕೀಯದಲ್ಲೂ ಹಿಂದೆ ಉಳಿದಿದ್ದಾರೆ. ಮೀಸಲಾತಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಸಮುದಾಯಕ್ಕೂ ನಿಗಮ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.‌

ADVERTISEMENT

ಜಿಲ್ಲಾ ದೇವಾಂಗ ಯುವ ವೇದಿಕೆಯ ಅಧ್ಯಕ್ಷ ಜೆ.ವೈ. ಸಚಿನ್, ಗಣೇಶ್, ವೇಣು, ಅರುಣ್, ಮಧುಕುಮಾರ್, ಅನುನಂದನ್, ಆದರ್ಶ, ವೀರಭದ್ರ, ಸಚಿನ್, ಹೇಮಂತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.