ADVERTISEMENT

ಅಗ್ನಿ ಆಕಸ್ಮಿಕ: ಮೂರು ಕಾರುಗಳು ಭಸ್ಮ

​ಪ್ರಜಾವಾಣಿ ವಾರ್ತೆ
Published 25 ಜನವರಿ 2022, 4:46 IST
Last Updated 25 ಜನವರಿ 2022, 4:46 IST

ಶಿವಮೊಗ್ಗ: ವಿನೋಬನಗರ ಆಟೊ ಕಾಂಪ್ಲೆಕ್ಸ್‌ನಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದ ಬೆಂಕಿ ಅವಘಡಕ್ಕೆ ಮೂರು ಕಾರುಗಳು ಆಹುತಿಯಾಗಿವೆ. ಒಂದು ಭಾಗಶಃ ಸುಟ್ಟುಹೋಗಿದೆ.

ಕೆಐಎಡಿಬಿ ಅಭಿವೃದ್ಧಿಪಡಿಸಿದ ಆಟೊ ಕಾಂಪ್ಲೆಕ್ಸ್ ಇದುವರೆಗೂ ನಗರ ಪಾಲಿಕೆಗೆ ಹಸ್ತಾಂತರ ಆಗಿಲ್ಲ. ಅಲ್ಲಿನ ಹಲವು ಮಾಲೀಕರು ತ್ಯಾಜ್ಯ ವಸ್ತುಗಳನ್ನು ಒಂದನೇ ತಿರುವಿನ ಖಾಲಿ ಜಾಗದಲ್ಲಿ ತಂದು ಸುರಿಯುತ್ತಾರೆ. ಸುತ್ತಲೂ ಗಿಡಗಳು ಬೆಳೆದಿವೆ. ಈ ಕಸಕ್ಕೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಪಕ್ಕದಲ್ಲೇ ಇದ್ದ ಗ್ಯಾರೇಜ್‌ಗಳಿಗೆ ಹಬ್ಬಿದೆ. ಅಗ್ನಿಶಾಮಕ ಸೇವೆಯ ಅಧಿಕಾರಿಗಳು ಸಕಾಲಕ್ಕೆ ಬಂದು ಹೆಚ್ಚಿನ ಅನಾಹುತ ತಪ್ಪಿಸಿದರು ಎಂದು ಸ್ಥಳೀಯರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT