ADVERTISEMENT

ಮರ ಕಡಿದ ಜಾಗ; ಗಿಡ ನೆಟ್ಟ ಅರಣ್ಯ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 12 ಜೂನ್ 2025, 15:58 IST
Last Updated 12 ಜೂನ್ 2025, 15:58 IST
ಶಿವಮೊಗ್ಗದ ಬಿ.ಎಚ್.ರಸ್ತೆಯ ಫುಟ್‌ಪಾತ್‌ನಲ್ಲಿ ದುಷ್ಕರ್ಮಿಗಳು ಮರ ಕಡಿದು ಹಾಕಿದ್ದ ಜಾಗದಲ್ಲಿ ಅರಣ್ಯ ಇಲಾಖೆಯಿಂದ ಗುರುವಾರ ಮತ್ತೆ ಗಿಡ ನೆಡಲಾಯಿತು
ಶಿವಮೊಗ್ಗದ ಬಿ.ಎಚ್.ರಸ್ತೆಯ ಫುಟ್‌ಪಾತ್‌ನಲ್ಲಿ ದುಷ್ಕರ್ಮಿಗಳು ಮರ ಕಡಿದು ಹಾಕಿದ್ದ ಜಾಗದಲ್ಲಿ ಅರಣ್ಯ ಇಲಾಖೆಯಿಂದ ಗುರುವಾರ ಮತ್ತೆ ಗಿಡ ನೆಡಲಾಯಿತು   

ಶಿವಮೊಗ್ಗ: ಇಲ್ಲಿನ ಬಿ.ಎಚ್‌.ರಸ್ತೆಯ ಫುಟ್‌ಪಾತ್‌ನಲ್ಲಿ ದುಷ್ಕರ್ಮಿಗಳು ಮರಗಳನ್ನು ಕಡಿದು ಹಾಕಿದ್ದ ಜಾಗದಲ್ಲಿಯೇ ಅರಣ್ಯ ಇಲಾಖೆಯಿಂದ ಮತ್ತೆ ಗಿಡಗಳನ್ನು ಗುರುವಾರ ನೆಡಲಾಯಿತು.

ಶಂಕರ ವಲಯದ ಆರ್‌ಎಫ್‌ಒ ವಿಜಯಕುಮಾರ್ ಹಾಗೂ ಡಿಆರ್‌ಎಫ್‌ಒ ನರೇಂದ್ರ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗಿಡ ನೆಟ್ಟರು.

ಅಧಿಕಾರಿಗಳು ಸ್ವತಃ ಹಾರೆ, ಪಿಕಾಸಿ ಹಿಡಿದು ಗುಂಡಿ ತೋಡಿ ಮರಕಡಿದ ಜಾಗ ಅಲ್ಲದೇ ಅಕ್ಕಪಕ್ಕದ ಜಾಗದಲ್ಲೂ 10 ಗಿಡಗಳನ್ನು ನೆಟ್ಟರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.