ADVERTISEMENT

ಹೊಸಗುಂದ ಸಾಂತರಸರ ವೀರಗಲ್ಲು ಶಾಸನ ಪತ್ತೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2019, 19:46 IST
Last Updated 4 ಡಿಸೆಂಬರ್ 2019, 19:46 IST
ಶಿವಮೊಗ್ಗ ತಾಲ್ಲೂಕಿನ ಮಲೆಶಂಕರ ದೇವಸ್ಥಾನ ಮುಂಭಾದಲ್ಲಿ ಈಚೆಗೆ ಪತ್ತೆಯಾದ ಹೊಸಗುಂದ ಸಾಂತರಸರ ವೀರಗಲ್ಲು ಶಾಸನ. 
ಶಿವಮೊಗ್ಗ ತಾಲ್ಲೂಕಿನ ಮಲೆಶಂಕರ ದೇವಸ್ಥಾನ ಮುಂಭಾದಲ್ಲಿ ಈಚೆಗೆ ಪತ್ತೆಯಾದ ಹೊಸಗುಂದ ಸಾಂತರಸರ ವೀರಗಲ್ಲು ಶಾಸನ.    

ಶಿವಮೊಗ್ಗ: ತಾಲ್ಲೂಕಿನ ಮಲೆಶಂಕರ ದೇವಸ್ಥಾನದ ಮುಂಭಾಗದಲ್ಲಿ ಈಚೆಗೆ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಸಹಾಯಕ ನಿರ್ದೇಶಕ ಆರ್. ಶೇಜೇಶ್ವರ ಕ್ಷೇತ್ರ ಕಾರ್ಯ ಕೈಗೊಂಡಾಗ ಹೊಸಗುಂದ ಸಾಂತರಸರ ವೀರಗಲ್ಲು ಶಾಸನ ಪತ್ತೆಯಾಗಿದೆ.

ಈ ಶಾಸನ ಒಂಬತ್ತು ಹಳೆಗನ್ನಡ ಲಿಪಿಯಿಂದ ಕೂಡಿದ್ದು, ಅಲ್ಲಲ್ಲಿ ಹಾಳಾಗಿದೆ. ಈ ಶಾಸನದಲ್ಲಿ ಹೊಸಗುಂದದ ಸಾಂತರಸರು ಬಿಲ್ಲೇಶ್ವರ ದೇವರ ಆರಾಧಕರು ಎಂದು ಉಲ್ಲೇಖಿಸಲಾಗಿದೆ.

ಸಾನ್ತರಾದಿತ್ಯನ ವಂಶದವರಾದ ಮಂಡಳಿಕರಾದ ಇವರು ಹೊಸಗುಂದ ನಾಡಿನಲ್ಲಿ ಆಳ್ವಿಕೆ ಮಾಡುವಾಗ ಊರಿನ ನಾಯಕ ಹೆಗ್ಗಡೆಯು ಶತ್ರುಗಳ ವಿರುದ್ಧ ಹೋರಾಡಿ ವೀರ ಮರಣ ಹೊಂದಿರುವುದನ್ನು ತಿಳಿಸುತ್ತದೆ.

ADVERTISEMENT

ವೀರಗಲ್ಲಿನ ಮಹತ್ವ: ಈ ವೀರಗಲ್ಲು ಶಾಸನವು ಹೊಸಗುಂದ ಸಾಂತರಸರ ಕ್ರಿ.ಶ.12–13ನೇ ಶತಮಾನದ್ದಾಗಿದೆ. ಇದು ತುಂಡಾಗಿದ್ದು, ಐದು ಪಟ್ಟಿಕೆಗಳಿಂದ ಕೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.