ಹೊಸನಗರ: ಪರವಾನಗಿಇಲ್ಲದೇ ಮತ್ತು ಸುರಕ್ಷಿತ ಕ್ರಮಗಳನ್ನು ಕೈಗೊಳ್ಳದೇ ಗೋವುಗಳನ್ನು ಸಾಗಿಸುತ್ತಿದ್ದ ಆರೋಪಿಯನ್ನು ವಾಹನ ಸಮೇತ ನಗರ ಪೊಲೀಸರು ಹುಲಿಕಲ್ ತನಿಖಾ ಗೇಟ್ ಬಳಿ ಶುಕ್ರವಾರ ಬೆಳಿಗ್ಗೆ ವಶಕ್ಕೆ ಪಡೆದಿದ್ದಾರೆ.
ಭದ್ರಾವತಿ ಉಜ್ಜಯಿನಿಪುರ ನಿವಾಸಿ ಪ್ರದೀಪ (30) ಬಂಧಿತ ಆರೋಪಿ.ಕುಂದಾಪುರ ತಾಲ್ಲೂಕಿನ ಕಾವ್ರಾಡಿಯಿಂದ ಮೂರು ಹಸು ಹಾಗೂ ಎರಡು ಕರುಗಳನ್ನು ಭದ್ರಾವತಿಗೆ ಸಾಗಿಸಲಾಗುತ್ತಿತ್ತು. ನಗರ ಠಾಣೆ ಎಸ್ಐ ಶಿವರಾಜ್ ಪ್ರಕರಣ ದಾಖಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.