ADVERTISEMENT

ಅಪರಾಧ ಪ್ರಕರಣ ಹೆಚ್ಚಳ: ಗಸ್ತಿಗೆ ತಿರುಗುತ್ತಿರುವ ನಿವಾಸಿಗಳು

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2021, 14:27 IST
Last Updated 23 ಸೆಪ್ಟೆಂಬರ್ 2021, 14:27 IST
ಶಿವಮೊಗ್ಗದ ಗೋಪಾಳಗೌಡ ಬಡಾವಣೆ ನಿವಾಸಿಗಳು ರಾತ್ರಿ ವೇಳೆ ಗಸ್ತು ತಿರುಗುತ್ತಿರುವುದು
ಶಿವಮೊಗ್ಗದ ಗೋಪಾಳಗೌಡ ಬಡಾವಣೆ ನಿವಾಸಿಗಳು ರಾತ್ರಿ ವೇಳೆ ಗಸ್ತು ತಿರುಗುತ್ತಿರುವುದು   

ಶಿವಮೊಗ್ಗ: ನಗರದ ಸ್ವಾಮಿ ವಿವೇಕಾನಂದ ಬಡಾವಣೆ ಹಾಗೂ ಗೋಪಾಲಗೌಡ ಬಡಾವಣೆಯಲ್ಲಿ ಕಳವು, ದರೋಡೆ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ನಿವಾಸಿಗಳೇ ಸ್ವಯಂ ರಕ್ಷಣೆಗೆ ಮುಂದಾಗಿದ್ದಾರೆ. ನಿವಾಸಿಗಳೇ ಗಸ್ತು ನಡೆಸುತ್ತಿದ್ದಾರೆ.

‘ದರೋಡೆ ಪ್ರಕರಣದಿಂದ ಜನರು ಓಡಾಡಲೂ ಭಯಪಡುವಂತಾಗಿದೆ. ಈ ಬಗ್ಗೆ ‍ಪೊಲೀಸ್‌ ಅಧಿಕಾರಿಗಳಿಗೆ ಹಲವು ಬಾರಿ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ನಾವೇ ಸ್ವಯಂ ರಕ್ಷಣೆಗೆ ಗುಸ್ತು ಕೈಗೊಂಡಿದ್ದೇವೆ’ ಎಂದು ನಿವಾಸಿಗಳು ಹೇಳಿದರು.

ಸ್ಥಳೀಯರು ಒಟ್ಟಾಗಿ ಸೇರಿ ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.