ಶಿವಮೊಗ್ಗ: ‘ಸಿದ್ಧಾಂತ ಇಟ್ಟುಕೊಂಡು ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಲಾಗುತ್ತಿದೆ. ಪಕ್ಷದ ನೀತಿ, ನಿಯಮ, ಶಿಸ್ತು, ಸಿದ್ಧಾಂತ ಪರಿಪಾಲನೆ ಮಾಡಿದಾಗ ಮಾತ್ರ ನಾಯಕತ್ವ ಗುಣ ಬೆಳೆಯಲು ಸಾಧ್ಯ’ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದಲ್ಲಿ ಮಂಗಳವಾರ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದಿಂದ ಹಮ್ಮಿಕೊಂಡಿದ್ದ ಜಿಲ್ಲಾ ಪ್ರಶಿಕ್ಷಣ ವರ್ಗ ಉದ್ಘಾಟಿಸಿ ಮಾತನಾಡಿದ ಅವರು, ‘ತತ್ವ, ಸಿದ್ಧಾಂತ, ಸೇವಾಮನೋಭಾವ ಮೈಗೂಡಿಸಿಕೊಳ್ಳುವ ಮೂಲಕ ಪ್ರತಿಯೊಬ್ಬ ಕಾರ್ಯಕರ್ತರೂ ಪಕ್ಷದ ವಿಚಾರಧಾರೆ ತಿಳಿದುಕೊಳ್ಳಬೇಕಿದೆ’ ಎಂದರು.
ಮಹಿಳೆಯರು ಹೋರಾಟಕ್ಕೆ ಇಳಿಯುವುದು ಮತ್ತು ಪಕ್ಷದ ಚಟುವಟಿಕೆಗಳಲ್ಲಿ ಭಾಗವಹಿಸುವ ಸಂಖ್ಯೆ ಈ ಹಿಂದೆ ಬೆರಳಣಿಕೆಯಷ್ಟು ಮಾತ್ರ ಇತ್ತು. ಆದರೆ, ಈಗ ಎಲ್ಲ ಚಟುವಟಿಕೆಗಳಲ್ಲೂ ಮಹಿಳೆಯರು ಪಾಲ್ಗೊಳ್ಳುತ್ತಿದ್ದಾರೆ. ಸಂಸಾರ ತೂಗಿಸಿಕೊಂಡು ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳು ತ್ತಿರುವುದು ವಿಶೇಷ ಸಂಗತಿ ಎಂದರು.
ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ವಿದ್ಯಾ ಲಕ್ಷ್ಮೀಪತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಬಿ.ಭಾನುಪ್ರಕಾಶ್, ರೇಣುಕಾ ನಾಗರಾಜ್, ಸುನೀತಾ ಜಗದೀಶ್, ಪದ್ಮಿನಿರಾವ್, ಶಿವರಾಜ್, ಗೀತಾ ಸಂದಾನಂದ ಶೆಟ್ಟಿ, ಕಲ್ಪನಾ ತಳವಾಟ, ಸಾಹಿವರ ಪ್ರಸಾದ್ ಹಾಗೂ ಮಂಡಲದ ಮಹಿಳಾ ಮೋರ್ಚಾ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.