ADVERTISEMENT

ಮುಸ್ಲಿಂ ಧಾರ್ಮಿಕ ಭಾವನೆಗೆ ಧಕ್ಕೆ ಆರೋಪ: ಟಿವಿ ನಿರೂಪಕರ ವಿರುದ್ಧ ಕ್ರಮಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 19 ಜೂನ್ 2020, 13:18 IST
Last Updated 19 ಜೂನ್ 2020, 13:18 IST

ಶಿವಮೊಗ್ಗ: ಖಾಸಗಿವಾಹಿನಿಯನಿರೂಪಕರೊಬ್ಬರು ಮುಸ್ಲಿಂಗರೀಬ್ ನವಾಜ್ (ಅಜ್ಮಿರ್ ಶರೀಫ್) ಅವರಕುರಿತುಕೀಳಾಗಿ ಮಾತನಾಡಿದ್ದಾರೆ.ಇದು ಮುಸ್ಲಿಮರ ಧಾರ್ಮಿಕಭಾವನೆಗಳಿಗೆ ಧಕ್ಕೆ ತಂದಿದೆ.ಅವರ ಮೇಲೆ ಎಫ್ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಅಂಜುಮನ್ ಎ ಇಸ್ಲಾಂ ಸಂಘಟನೆಯ ಸದಸ್ಯರು ಶುಕ್ರವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಇಸ್ಲಾಮಿಕ್ ಸಂತರು, ಇಸ್ಲಾಮ್ ಧರ್ಮ ಕುರಿತು ಸಾರ್ವಜನಿಕರಲ್ಲಿ ತಪ್ಪು ಭಾವನೆ ಮೂಡಿಸಲಾಗಿದೆ. ಶಾಂತಿ, ಸುವ್ಯವಸ್ಥೆಗೆ ಭಂಗ ತರುವ ವಾತಾವರಣ ಸೃಷ್ಟಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಘಟನೆಯ ಅಧ್ಯಕ್ಷ ಜಫ್ರುಲ್ಲಾ ಸತ್ತರ್ ಖಾನ್, ಕಾರ್ಯದರ್ಶಿನಿಸಾರ್ ಅಹಮದ್‌, ಉಪಾಧ್ಯಕ್ಷ ಅಸ್ತಾಫ್ ಅಹಮದ್‌, ಅಫ್ಜಲ್ ಬೇಗ್ ಮನವಿ ಸಲ್ಲಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.