ಭದ್ರಾವತಿ: ಮೇಕೆದಾಟು ಪಾದಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನಗರಕ್ಕೆ ಹಿಂತಿರುಗಿರುವ ಶಾಸಕ ಬಿ.ಕೆ. ಸಂಗಮೇಶ್ವರ ಅವರು ಒಂದು ವಾರಗಳ ಕಾಲ ಹೋಂ ಐಸೋಲೇಷನ್ನಲ್ಲಿ ಇದ್ದಾರೆ.
ಇದರಿಂದ ಶುಕ್ರವಾರ ಅವರ ಭೇಟಿಗೆ ಬಂದ ಜನರುವಾಪಸಾದರು.
ಶಾಸಕರ ಗೃಹ ಕಚೇರಿಯ ಸಿಬ್ಬಂದಿ ಕೆಲಸ ಮಾಡುತ್ತಿದ್ದು, ಅಗತ್ಯ ಇರುವ ಸೇವೆಯನ್ನು ಅವರಿಂದ ಒದಗಿಸುವ ಪ್ರಯತ್ನ ನಡೆದಿದೆ.ಶಾಸಕರು ಬೆಂಗಳೂರಿನಿಂದ ಹಿಂತಿರುಗಿರುವ ವಿಷಯ ತಿಳಿದು ಅವರ ಅಭಿಮಾನಿಗಳು, ಸ್ಥಳೀಯ ಸಂಸ್ಥೆ ಚುನಾಯಿತ ಪ್ರತಿನಿಧಿಗಳು ಅವರನ್ನು ಭೇಟಿ ಮಾಡಲು ನಿವಾಸಕ್ಕೆ ಬಂದರೂ ಹೋಂ ಐಸೊಲೇಷನ್ ಆಗಿರುವ ಶಾಸಕರು ಯಾರನ್ನೂ ಭೇಟಿಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.