ADVERTISEMENT

ಪೊಲಿಸ್‌ ಠಾಣೆಗೆ ಬಂದ ಕೆರೆ ಹಾವು

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2019, 12:47 IST
Last Updated 14 ಸೆಪ್ಟೆಂಬರ್ 2019, 12:47 IST

ಶಿವಮೊಗ್ಗ: ಜಯನಗರ ಪೊಲೀಸ್ ಠಾಣೆಗೆ ಶನಿವಾರ ಹಾವು ನುಗ್ಗಿ ಸ್ವಲ್ಪ ಸಮಯ ಆತಂಕದ ವಾತಾವರಣ ಸೃಷ್ಟಿಸಿತ್ತು.

ಜೆರಾಕ್ಸ್ ಮಿಷಿನ್ ಬಳಿ ಇದ್ದ ಹಾವು ಕಂಡು ಗಾಬರಿಯಾದ ಪೊಲೀಸರು ಸ್ನೇಕ್ ಕಿರಣ್‌ಗೆ ಕರೆ ಮಾಡಿದರು. ನಂತರ ಕಿರಣ್ ಹಾವು ಹಿಡಿದು ಕಾಡಿಗೆ ಬಿಟ್ಟು ಬಂದರು.

ಅದು 3 ಅಡಿ ಉದ್ದದ ಕೆರೆ ಹಾವು. ಜಯನಗರ ಠಾಣೆ ಸುತ್ತಮುತ್ತ ಇಲಿಗಳು ಜಾಸ್ತಿ ಇವೆ. ಇಲಿ ತಿನ್ನುವ ಸಲುವಾಗಿ ಹಾವು ಠಾಣೆ ಪ್ರವೇಶಿಸಿದೆ ಎಂದು ಕಿರಣ್‌ ಮಾಹಿತಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.