ADVERTISEMENT

ಪಿಯುನಿಂದಲೇ ಸ್ಪರ್ಧಾ ಪರೀಕ್ಷೆಗೆ ಸಿದ್ಧತೆ: ತೇಜಸ್‌ ಸಾಥ್

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2019, 12:18 IST
Last Updated 13 ಡಿಸೆಂಬರ್ 2019, 12:18 IST

ಶಿವಮೊಗ್ಗ: ತೇಜಸ್ ಟ್ರಸ್ಟ್ ಪ್ರತಿಭಾವಂತ ವಿದ್ಯಾರ್ಥಿಗಳಿಗೆಪಿಯು, ಪದವಿ ಶಿಕ್ಷಣಕ್ಕೆ ಅವಕಾಶ ಮಾಡಿಕೊಟ್ಟಿದೆ. ಯುಪಿಎಸ್‌ಸಿ ಪರೀಕ್ಷೆ ಎದುರಿಸಲು ಎರಡು ವರ್ಷ ಉಚಿತ ತರಬೇತಿ ನೀಡುತ್ತಿದೆಎಂದು ಟ್ರಸ್ಟಿಎ.ಜೆ.ರಾಮಚಂದ್ರ ತಿಳಿಸಿದರು.

ಟ್ರಸ್ಟ್ 5 ವರ್ಷಗಳಿಂದತರಬೇತಿ ನೀಡಲಾಗುತ್ತಿದೆ.ದೇಶದ ಸೇವೆಯಲ್ಲಿ ದಕ್ಷ, ಪ್ರ್ರಾಮಾಣಿಕ ಮತ್ತು ದೇಶನಿಷ್ಠ ಅಧಿಕಾರಿಗಳು ಇರಬೇಕು ಎಂಬ ಧ್ಯೇಯ ಇಟ್ಟುಕೊಂಡು ಈ ಯೋಜನೆ ಕೈಗೊಂಡಿದೆ.ಆಯ್ಕೆಯಾದ ಮಕ್ಕಳಿಗೆ ಉಚಿತವಾಗಿ ಶಿಕ್ಷಣ, ತರಬೇತಿ, ಊಟ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಪಿಯು ಹಾಗೂ ಪದವಿ ಶಿಕ್ಷಣವನ್ನು ಪ್ರತಿಷ್ಠಿತ ಕಾಲೇಜುಗಳಲ್ಲಿ ಕೊಡಿಸಲಾಗುತ್ತದೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪ್ರತಿವರ್ಷ 30 ವಿದ್ಯಾರ್ಥಿಗಳಿಗೆ ಅರ್ಹತೆಯ ಆಧಾರದ ಮೇಲೆಅವಕಾಶ ಕಲ್ಪಿಸಲಾಗುತ್ತಿದೆ. ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರವೇಶ ಪರೀಕ್ಷೆ ನಡೆಸಲಾಗುತ್ತಿದೆ.ಅರ್ಜಿಸಲ್ಲಿಸಲು ಡಿ.20 ಕೊನೆಯ ದಿನ. ಜ.5ರಂದು ಲಿಖಿತ ಪರೀಕ್ಷೆ. ಮಾಹಿತಿಗೆತೇಜಸ್ ಪ್ರಕಲ್ಪ, ವಿಕಾಸ ಪ್ರೌಢಶಾಲೆ, ಆಲ್ಕೋಳ, ಶಿವಮೊಗ್ಗಇಲ್ಲಿಗೆ ಭೇಟಿ ನೀಡಬಹುದು. 92433 14305 ಅಥವಾ 94493 61321 ಸಂಪರ್ಕಿಸಬಹುದುಎಂದರು.

ADVERTISEMENT

ಪತ್ರಿಕಾಗೋಷ್ಠಿಯಲ್ಲಿ ವೈ.ವಿ.ವಿ.ಜೋಶಿ, ಮಮತಾ ಸುಧೀಂದ್ರ, ರಮೇಶ್ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.