ADVERTISEMENT

ರೌಡಿಶೀಟರ್ ಗಿರಿ ಕೊಲೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2020, 15:45 IST
Last Updated 6 ಫೆಬ್ರುವರಿ 2020, 15:45 IST

ಶಿವಮೊಗ್ಗ:ಗೋಪಾಳದ ಸಿದ್ದೇಶ್ವರ ವೃತ್ತದ ಬಳಿ ಗುರುವಾರ ಸಂಜೆ ರೌಡಿಶೀಟರ್ಗಿರೀಶ್ಅಲಿಯಾಸ್ ಗಿರಿ (33) ಕೊಲೆಯಾಗಿದೆ.

ನಗರದ ಹೊರವಲಯದ ಅನುಪಿನ ಕಟ್ಟೆ–ಗೋವಿಂದಾಪುರನೆಡುತೋಪಿನಲ್ಲಿಜೂಜಾಟದ ಆಡುವಾಗಗಿರೀಶ್ ಆತನ ಸ್ನೇಹಿತ ದೊರೆರಾಜ್ ಮತ್ತು ಹಜ್ರುಆತನ ಸಹೋದರ ಶೋಯೆಬ್, ತಬರೀಜ್ ತಂಡದ ಮಧ್ಯೆ ಜಗಳ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಗಿರಿ ಅಲ್ಲಿಂದ ಹೊರಟಿದ್ದಾನೆ.ಆಗಹಜ್ರು ಹಾಗೂಇತರ ಐವರುಸಿನಿಮೀಯ ರೀತಿಯಲ್ಲಿ ಹಿಂಬಾಲಿಸಿಕೊಂಡು ಬಂದಿದ್ದಾರೆ. ಸಿದ್ದೇಶ್ವರ ವೃತ್ತದ ಬಳಿಬರ್ಜಿಯಿಂದಇರಿದಿದ್ದಾರೆ. ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಬದುಕುಳಿಯಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದರು.

ಕೊಲೆಯಾದ ಗಿರಿ ರೌಡಿಶೀಟರ್ ಹಂದಿ ಅಣ್ಣಿಯ ಕಿರಿಯ ಸಹೋದರ. ರೌಡಿಗಳಾದಲವಕುಶ ಕೊಲೆ ಪ್ರಕರಣದ ಪ್ರಮುಖ ಆರೋಪಿ. ಬುಧವಾರವಷ್ಟೇ ಕಾರಾಗೃಹದಿಂದ ಬಿಡುಗಡೆಯಾಗಿದ್ದ. ವಿವಿಧ ಠಾಣೆಗಳಲ್ಲಿ ಆತನ ವಿರುದ್ಧ ಮಟ್ಕಾ, ದೊಂಬಿ ಪ್ರಕರಣಗಳು ದಾಖಲಾಗಿದ್ದವು. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.