ಶಿವಮೊಗ್ಗ: ಇಲ್ಲಿನ ವಿನೋಬನಗರದಲ್ಲಿ ಗೃಹಿಣಿಯೊಬ್ಬರು ಶುಕ್ರವಾರ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.
ಸಾವಿತ್ರಿ ನಟರಾಜ್ ಮೃತಪಟ್ಟವರು.
ಹಾವೇರಿ ಜಿಲ್ಲೆ ಅಗಡಿ ಗ್ರಾಮದ ಅವರು 6 ವರ್ಷಗಳ ಹಿಂದೆ ನಟರಾಜ್ ಅವರನ್ನು ಮದುವೆಯಾಗಿದ್ದರು.
ವರದಕ್ಷಿಣೆ ಕಿರುಕುಳವೇ ಸಾವಿಗೆ ಕಾರಣ. ಕೊಲೆ ಮಾಡಿ ನೇಣುಹಾಕಲಾಗಿದೆ ಎಂದು ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.