ADVERTISEMENT

ಶಿವಮೊಗ್ಗ: ಈಶ್ವರಪ್ಪ ಮನೆಗೆ ಸ್ವಾಮೀಜಿಗಳ ಭೇಟಿ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2022, 6:35 IST
Last Updated 18 ಏಪ್ರಿಲ್ 2022, 6:35 IST
ಶಿವಮೊಗ್ಗದಲ್ಲಿರುವ ಶಾಸಕ ಕೆ.ಎಸ್‌. ಈಶ್ವರಪ್ಪ ಅವರ ಮನೆಗೆ ಭಾನುವಾರ ಕೇದಾರನಾಥಶ್ರೀ ಸೇರಿ ವಿವಿಧ ಮಠಾಧೀಶರು ಭೇಟಿ ನೀಡಿದ್ದರು.
ಶಿವಮೊಗ್ಗದಲ್ಲಿರುವ ಶಾಸಕ ಕೆ.ಎಸ್‌. ಈಶ್ವರಪ್ಪ ಅವರ ಮನೆಗೆ ಭಾನುವಾರ ಕೇದಾರನಾಥಶ್ರೀ ಸೇರಿ ವಿವಿಧ ಮಠಾಧೀಶರು ಭೇಟಿ ನೀಡಿದ್ದರು.   

ಶಿವಮೊಗ್ಗ: ಶಾಸಕ ಈಶ್ವರಪ್ಪ ಅವರ ಮನೆಗೆ ಮಠಾಧೀಶರ ಭೇಟಿ ಮುಂದುವರಿದಿದ್ದು, ಭಾನುವಾರ ಕೇದಾರನಾಥಶ್ರೀಸೇರಿ 8 ಮಂದಿ ಸ್ವಾಮೀಜಿಗಳುಭೇಟಿ ನೀಡಿ ಧೈರ್ಯ ತುಂಬಿದರು.

ಗುತ್ತಲ ಕಲ್ಮಠದ ಪ್ರಭು ಸ್ವಾಮೀಜಿ, ತೊಗರ್ಸಿ ಮಳೆ ಹಿರೇಮಠದ ಮಹಾಂತ ಶಿವಾಚಾರ್ಯ ಸ್ವಾಮೀಜಿ,
ಜಡೆ ಸಂಸ್ಥಾನ ಮಠದ ಯೋಗಾಚಾರ್ಯ ಮಹಾಂತ ಸ್ವಾಮೀಜಿ, ಬಿಳಕಿ ರಂಭಾಪುರಪುರಿ ಶಾಖಾಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಮೂಲಗದ್ದೆ ಶಿವಯೋಗಾಶ್ರಮದ ಚನ್ನಬಸವ ಸ್ವಾಮೀಜಿ, ಬಿದರೆ ಕಂಚುಕಲ್ಲು ದೊಡ್ಡಮಠದ ಪ್ರಭು ಕುಮಾರ ಸ್ವಾಮೀಜಿ, ಹಾರನಹಳ್ಳಿ ಚೌಕಿಮಠದ ನೀಲಕಂಠ ಸ್ವಾಮೀಜಿ ಭೇಟಿ ನೀಡಿದರು.

ರಾಜೀನಾಮೆ ನೀಡಿದ್ದೇ ಒಳ್ಳೆಯದಾಯಿತು: ‘ನಾನು ರಾಜೀನಾಮೆ ನೀಡಿದ್ದರಿಂದ ನಿಮ್ಮನ್ನು ನೋಡೋ ಭಾಗ್ಯ ದೊರಕಿದೆ. ಇದನ್ನೆಲ್ಲ ನೋಡಿದರೆ ರಾಜೀನಾಮೆ ನೀಡಿದ್ದೇ ಒಳ್ಳೆಯದಾಯಿತು ಅನ್ನಿಸುತ್ತಿದೆ’ ಎಂದು ಈಶ್ವರಪ್ಪ ಸ್ವಾಮೀಜಿಗಳಿಗೆಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.