ADVERTISEMENT

ಮಲಗಿದ್ದಲ್ಲೇ ಟ್ಯಾಂಕರ್‌ ಚಾಲಕ ಸಾವು

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2022, 4:53 IST
Last Updated 21 ಏಪ್ರಿಲ್ 2022, 4:53 IST

ರಿಪ್ಪನ್‌ಪೇಟೆ: ಟ್ಯಾಂಕರ್‌ನಲ್ಲಿ ರಾತ್ರಿ ಮಲಗಿದ್ದ ವೇಳೆಹೃದಯಾಘಾತದಿಂದ ಚಾಲಕರೊಬ್ಬರು ಮೃತಪಟ್ಟಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಕೆ.ಬಿ. ರಸ್ತೆ ನಿವಾಸಿ ಮಧುಕರ (37) ಮೃತಪಟ್ಟ ಚಾಲಕ. ಕಾರವಾರದಿಂದ ತೀರ್ಥಹಳ್ಳಿಗೆ ಡಾಂಬಾರ್ ತುಂಬಿಕೊಂಡು ಮಂಗಳವಾರ ಬರುತ್ತಿದ್ದಾಗ ರಾತ್ರಿಯಾದ ಕಾರಣಪಟ್ಟಣದ ಸಾಗರ ರಸ್ತೆಯ ಕುಕ್ಕಳಲೆ ಮಾರ್ಗದ ಬಳಿ ಟ್ಯಾಂಕರ್‌ ನಿಲ್ಲಿಸಿ ಮಲಗಿದ್ದರು.

ಬುಧವಾರ ಬೆಳಿಗ್ಗೆ ಆದರೂ ನಿಗದಿತ ಸ್ಥಳಕ್ಕೆ ಡಾಂಬಾರ್‌ ಬರದ ಕಾರಣ ಸಂಬಂಧಿಸಿದವರು ಉಡುಪಿ ಜಿಲ್ಲೆಯ ಬ್ರಹ್ಮಾವರದ ಟ್ಯಾಂಕರ್‌ ಮಾಲೀಕರ ಗಮನಕ್ಕೆ ತಂದಿದ್ದಾರೆ. ದೂರವಾಣಿಗೆ ಕರೆ ಮಾಡಿದರೆ ಚಾಲಕ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಹುಡುಕಾಟ ಮಾಡಿದಾಗ ರಿಪ್ಪನ್‌ಪೇಟೆ ಸಮೀಪ ಟ್ಯಾಂಕರ್‌ ನಿಂತಿರುವುದನ್ನು ಕಂಡು ನೋಡಿದಾಗ ಮಲಗಿದ ಸ್ಥಿತಿಯಲ್ಲಿ ಮೃತಪಟ್ಟಿರುವುದು ತಿಳಿದಿದೆ.

ADVERTISEMENT

ರಿಪ್ಪನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.