ADVERTISEMENT

ಮರ ಅಕ್ರಮ ಕಡಿತಲೆ: ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2022, 5:21 IST
Last Updated 17 ಸೆಪ್ಟೆಂಬರ್ 2022, 5:21 IST
ಅಕೇಶಿಯಾ ನೆಡುತೋಪಿನಲ್ಲಿ ಕಡಿತಲೆ ಮಾಡಿದ ಮರಗಳ ತುಂಡು
ಅಕೇಶಿಯಾ ನೆಡುತೋಪಿನಲ್ಲಿ ಕಡಿತಲೆ ಮಾಡಿದ ಮರಗಳ ತುಂಡು   

ರಿಪ್ಪನ್‌ಪೇಟೆ: ಹೊಂಬುಜ ಹೋಬಳಿ ವ್ಯಾಪ್ತಿಯ ಮಳಲಿ ಹಾಗೂ ಕಟ್ಟೆ ಗ್ರಾಮದಲ್ಲಿಅಕೇಶಿಯಾ ನೆಡುತೋಪಿನಲ್ಲಿ ಮರಗಳ ಅಕ್ರಮ ಕಡಿತಲೆ ಸಂಬಂಧ ಪ್ರಕರಣ ದಾಖಲಾಗಿದೆ.

ಮಳಲಿ ಗ್ರಾಮದ‌ ಸರ್ವೆನಂ–4 ಹಾಗೂ ಹೊಂಬುಜದ ಸರ್ವೇ ನಂಬರ್ 18ರಲ್ಲಿ ಸರ್ಕಾರಿ ಜಾಗದಲ್ಲಿ ಮರಗಳನ್ನು ಕಡಿತಲೆ ಮಾಡಿ ಕಳ್ಳಸಾಗಾಣಿಕೆ ಮಾಡುತ್ತಿದ್ದ ಆರೋಪ
ಸಂಬಂಧ ಅರಸಾಳು ವಲಯ ಅರಣ್ಯಾಧಿಕಾರಿಗಳು ಇಬ್ಬರ ವಿರುದ್ಧ ಅರಣ್ಯ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ.

ಕಟ್ಟೆ ಗ್ರಾಮದ ರಾಮಚಂದ್ರ ಕೆ.ವೈ. ಹಾಗೂ ಮುದ್ದಪ್ಪ ಕೆ.ವೈ. ವಿರುದ್ಧ ಪ್ರಕರಣ ದಾಖಲಿಸಿ, ಅವರು ಸಂಗ್ರಹಿಸಿದ್ದ ಅಕೇಶಿಯಾ ನಾಟಗಳನ್ನು ವಶಪಡಿಸಿಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.