ADVERTISEMENT

ವಿಜಯದಶಮಿಗೆ ಬಿನ್ನಿ ಪೂಜೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 9:30 IST
Last Updated 8 ಅಕ್ಟೋಬರ್ 2011, 9:30 IST

ಪಾವಗಡ: ವಿಜಯದಶಮಿ ವಿಜಯೋತ್ಸವ ಪ್ರತಿ ವರ್ಷದಂತೆ ಈ ಬಾರಿಯೂ ಆಕರ್ಷಕವಾಗಿ ನಡೆಯಿತು.
ವೇಣುಗೋಪಾಲ ಸ್ವಾಮಿ ದೇವಾಲಯ ಬಳಿಯಿಂದ ಗ್ರಾಮ ದೇವತೆಗಳೊಂದಿಗೆ ಹೊರಟ ಮೆರವಣಿಗೆಯಲ್ಲಿ ತಹಶೀಲ್ದಾರ್ ಜಿ.ಎಸ್.ಪ್ರಸನ್ನಕುಮಾರ್, ಪುರಸಭೆ ಅಧ್ಯಕ್ಷ ಗುರಪ್ಪ ಇತರರು ಭಾಗವಹಿಸಿದ್ದರು. ಬನ್ನಿ ಮಂಟಪಕ್ಕೆ ತೆರಳಿ ಬನ್ನಿ ಮರಕ್ಕೆ ಅಂಬು ಹೊಡೆದು ತಾಲ್ಲೂಕಿನಲ್ಲಿ ಮಳೆ ಬೆಳೆ ಸಂವೃದ್ಧಿಯಾಗುವಂತೆ ಕೋರಿ ಪೂಜೆ ಸಲ್ಲಿಸಿದರು.

ಗ್ರಾಮ ದೇವತೆಗಳಾದ ಮಾರಮ್ಮ, ವೇಣುಗೋಪಾಲಸ್ವಾಮಿ, ಶನಿಶ್ವರ ಸ್ವಾಮಿ, ಕಾಳಮ್ಮ, ಸಪಲಮ್ಮ, ಮುತ್ಯಾಲಮ್ಮ, ವಾಸವಿ ದೇವತೆಗಳು ಭಾಗವಹಿಸಿದ್ದವು. ಪಾಲ್ಗೊಂಡ ಜನರು ಬನ್ನಿ ಪತ್ರೆಯನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ದಸರ ಶುಭಾಶಯ ವಿನಿಮಯ ಮಾಡಿಕೊಂಡರು.

ವೈ.ಎನ್.ಹೊಸಕೋಟೆಯಲ್ಲಿ ಕನ್ನಿಕಾಪರಮೇಶ್ವರಿ ದೇವಾಲಯದ ಬಳಿಯಿಂದ ಸೀತಾರಾಮ, ಲಕ್ಷ್ಮಣ, ವಾಸವಾಂಭ ಮಾರಮ್ಮ ದೇವತೆಗಳ ಮೆರವಣಿಗೆ ಆರಂಭವಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಾತಮ್ಮ, ಇತರರು ಮೆರವಣಿಗೆಯಲ್ಲಿ ತೆರಳಿ ಬನ್ನಿಮಂಟಪದಲ್ಲಿ ಬನ್ನಿ ಪೂಜೆ ನೆರವೇರಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.