ಕೊರಟಗೆರೆ: ಪಟ್ಟಣದ ಮುಖ್ಯರಸ್ತೆ ಬದಿಯ ಅಂಗಡಿ ಮುಂದೆ ನಿಂತಿದ್ದ ಸಾರ್ವಜನಿಕರ ಮೇಲೆ ಹುಚ್ಚು ನಾಯಿಯೊಂದು ದಾಳಿ ನಡೆಸಿ, ಅರ್ಧಗಂಟೆಯೊಳಗೆ 15 ಜನರಿಗೆ ಕಚ್ಚಿದೆ.
ಪಟ್ಟಣದ ಮುಖ್ಯ ರಸ್ತೆಯಲ್ಲಿ ಗುರುವಾರ ಮಧ್ಯಾಹ್ನ ದಿಢೀರ್ ಕಾಣಿಸಿಕೊಂಡ ಹುಚ್ಚುನಾಯಿ ಮುಖ್ಯ ರಸ್ತೆಯಲ್ಲಿ ಓಡಾಡುತ್ತಿದ್ದ ಸಾರ್ವಜನಿಕರನ್ನು ಅಟ್ಟಾಡಿಸಿಕೊಂಡು ಕಚ್ಚಿ ತೀವ್ರ ಗಾಯಗೊಳಿಸಿದೆ.
ನಾಯಿಯ ದಾಳಿಯಿಂದ ನರಸಪ್ಪ, ರಾಜಶೇಖರ್, ವೆಂಕಟೇಶ್, ನರಸಯ್ಯ, ಪ್ರಕಾಶ್, ನಾಗರಾಜು, ಮಾನಸ, ವೀರಭದ್ರಯ್ಯ ಎಂಬುವರಿಗೆ ಗಂಂಭೀರ ಗಾಯಗಳಾಗಿವೆ.
ಕೊರಟಗೆರೆ ಹಾಗೂ ತುಮಕೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮುಖ್ಯ ರಸ್ತೆಯಲ್ಲಿ ಸಾರ್ವಜನಿಕರ ಮೇಲೆ ಏಕಾಏಕಿ ಎರಗುತ್ತಿದ್ದ ನಾಯಿಯನ್ನು ಪಟ್ಟಣ ಪಂಚಾಯಿತಿ ಸಿಬ್ಬಂದಿ ಅಟ್ಟಾಡಿಸಿಕೊಂಡು ಹಿಡಿದಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.