ಮಧುಗಿರಿ: ಜಮೀನಿನ ಮಾಲೀಕ ತಾಲ್ಲೂಕಿನ ನೇರಳೆಕೆರೆ ಗ್ರಾಮದ ಸಾಬ್ಜಾನ್ ಅವರ ಪುತ್ರ ಫಕ್ರುದ್ದೀನ್ ಅವರು ಕೃಷಿ ಭೂಮಿ ಮೇಲೆ ಸಾಲ ಪಡೆಯಲು ಎಸ್ಬಿಐ ಬ್ಯಾಂಕ್ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪರಿಶೀಲಿಸಿದ ಬ್ಯಾಂಕ್ನವರು ನಿಮ್ಮ ಹೆಸರಿನಲ್ಲಿ ಈಗಾಗಲೇ ಸಾಲ ಕೊಡಲಾಗಿದೆ ಎಂದು ದಾಖಲೆ ನೀಡಿದ್ದಾರೆ. ಇದನ್ನು ನೋಡಿದ ಫಕ್ರುದ್ದೀನ್ ಕಂಗಾಲಾಗಿದ್ದಾರೆ.
ಗ್ರಾಮದಲ್ಲಿ ಫಕೃದ್ದೀನ್ ಹೆಸರಿನ ಮತ್ತೊಬ್ಬ ಇದ್ದಾನೆ. ಈತನು ಸರ್ವೆ ನಂಬರ್ 46/ಪಿ 14ರ 3 ಎಕರೆ 20 ಗುಂಟೆ ಜಮೀನಿನ ಖಾತೆ ಪಹಣಿ ಪಡೆದಿದ್ದಾನೆ. ತನ್ನ ಆಧಾರ್ ಕಾರ್ಡ್ ನೀಡಿ ತಾನೇ ಫಕ್ರುದ್ಧೀನ್ ಎಂದು ಹೇಳಿ ಬ್ಯಾಂಕ್ನಿಂದ ಸಾಲ ಪಡೆದಿದ್ದಾನೆ.
ಪಹಣಿಯಲ್ಲಿ ಭೂ ಮಾಲೀಕರ ಭಾವ ಚಿತ್ರ ಇರುವುದಿಲ್ಲ. ಹೀಗಾಗಿ ಬ್ಯಾಂಕ್ನವರಿಗೆ ಈತ ನಕಲಿ ಫಕ್ರುದ್ದೀನ್ ಎಂದು ತಿಳಿಯಲು ಸಾಧ್ಯವಾಗಿಲ್ಲ. ಗ್ರಾಮ ಪಂಚಾಯಿತಿಯಿಂದ ಪಡೆದಿರುವ ವಾಸಸ್ಥಳ ದೃಢೀಕರಣ ಪತ್ರದಲ್ಲಿ ನಕಲಿ ಫಕೃದ್ದೀನ್ ತನ್ನ ತಂದೆ ಸಾಬ್ಜಾನ್ ಸಾಬ್ ಎಂದೇ ಬರೆಸಿದ್ದಾನೆ. ಇದು ಈ ಯಡವಟ್ಟಿಗೆ ಕಾರಣವಾಗಿದೆ. ಈ ಬಗ್ಗೆ ಬ್ಯಾಂಕ್ನವರು ಮಿಡಿಗೇಶಿ ಠಾಣೆಗೆ ದೂರು ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.