ADVERTISEMENT

ಬಿಸಿಲಿಗೆ ಬಸವಳಿದ ಅನ್ನದಾತರು

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2022, 5:46 IST
Last Updated 26 ಏಪ್ರಿಲ್ 2022, 5:46 IST

ಹುಳಿಯಾರು/ ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಹುಳಿಯಾರು ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣ ಮತ್ತು ಚಿಕ್ಕನಾಯಕನಹಳ್ಳಿ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ರಾಗಿ ಖರೀದಿಯ ಟೋಕನ್‌ ಪಡೆಯಲು ಸೋಮವಾರ ಮಧ್ಯಾಹ್ನದವರೆಗೂ ಬಿಸಿಲಿನಲ್ಲಿ ರೈತರು ಕಾದು ನಿಂತಿದ್ದರು.

ರಾಜ್ಯ ಸರ್ಕಾರ ಬೆಂಬಲ ಬೆಲೆಯಡಿ ರಾಗಿ ಖರೀದಿಸಲು ಮತ್ತೆ ಅವಕಾಶ ನೀಡಿದ್ದು ಸೋಮವಾರದಿಂದ ನೋಂದಣಿ ನಡೆಯಲಿದೆ ಎಂದು ಪ್ರಚುರಪಡಿಸಲಾಗಿತ್ತು. ಇದರಿಂದ ಸಣ್ಣ ಮತ್ತು ಮಧ್ಯಮ ವರ್ಗದ ರೈತರು ಸರತಿ ಸಾಲಿನಲ್ಲಿ ಕೇಂದ್ರಗಳ ಮುಂದೆ ನಿಂತಿದ್ದರು.

ಆದರೆ, ಖರೀದಿಗೆ ನೋಂದಣಿ ಮಾಡಿಕೊಂಡು ಟೋಕನ್‌ ಕೊಡದೆ ಇದ್ದಾಗ ರೈತರ ತಾಳ್ಮೆಯ ಕಟ್ಟೆಯೊಡೆದಿತ್ತು. ರೈತರ ಗಲಾಟೆ ಜೋರಾದಾಗ ಸಂಬಂಧಪಟ್ಟ ಅಧಿಕಾರಿಗಳು ಸಮಜಾಯಿಸಿ ನೀಡಲು ಮುಂದಾದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.