ADVERTISEMENT

ತುಮಕೂರು | ವ್ಯಸನಮುಕ್ತರಾಗಲು ಅಯ್ಯಪ್ಪ ಭಕ್ತರಾಗಿ: ಶಿವಾಚಾರ್ಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 5:41 IST
Last Updated 26 ಡಿಸೆಂಬರ್ 2025, 5:41 IST
ತುಮಕೂರಿನ ಕೆ.ಆರ್.ಬಡಾವಣೆ ಬಿದಿರುಮಳೆ ತೋಟದ ರಸ್ತೆಯಲ್ಲಿರುವ ಅಯ್ಯಪ್ಪಸ್ವಾಮಿ ದೇಗುಲದ ವಾರ್ಷಿಕೋತ್ಸವ ಗುರುವಾರ ನೆರವೇರಿತು. ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಟಿ.ಎ.ಸುಧೀರ್, ಇತರರು ಭಾಗವಹಿಸಿದ್ದರು
ತುಮಕೂರಿನ ಕೆ.ಆರ್.ಬಡಾವಣೆ ಬಿದಿರುಮಳೆ ತೋಟದ ರಸ್ತೆಯಲ್ಲಿರುವ ಅಯ್ಯಪ್ಪಸ್ವಾಮಿ ದೇಗುಲದ ವಾರ್ಷಿಕೋತ್ಸವ ಗುರುವಾರ ನೆರವೇರಿತು. ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಟಿ.ಎ.ಸುಧೀರ್, ಇತರರು ಭಾಗವಹಿಸಿದ್ದರು   

ತುಮಕೂರು: ಅಯ್ಯಪ್ಪಸ್ವಾಮಿ ಭಕ್ತರಾದವರು ವ್ಯಸನ ಮುಕ್ತರಾಗಬೇಕು ಎಂದು ಹಿರೇಮಠಾಧ್ಯಕ್ಷ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.

ನಗರದ ಕೆ.ಆರ್.ಬಡಾವಣೆ ಬಿದಿರುಮಳೆ ತೋಟದ ರಸ್ತೆಯಲ್ಲಿರುವ ಮಣಿಕಂಠಸ್ವಾಮಿ ಚಾರಿಟೆಬಲ್ ಟ್ರಸ್ಟ್‌ನ ಅಯ್ಯಪ್ಪಸ್ವಾಮಿ ದೇವಾಲಯದ 27ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಮ್ಮ ಸಂಸ್ಕೃತಿಯಲ್ಲಿ ಅಯ್ಯಪ್ಪಸ್ವಾಮಿ ಭಕ್ತರು ಸೇರಿದಂತೆ ಪ್ರತಿಯೊಬ್ಬರೂ ತಂದೆ-ತಾಯಿ, ಗುರು-ಹಿರಿಯರನ್ನು ಗೌರವದಿಂದ ಕಾಣಬೇಕು. ಯಾವುದೇ ಕಾರಣಕ್ಕೂ ಹೆತ್ತವರನ್ನು ಗೋಳಾಡಿಸದೆ ನೋಡಿಕೊಳ್ಳಬೇಕು. ಅಯ್ಯಪ್ಪಸ್ವಾಮಿ ದೀಕ್ಷೆ ಪಡೆದ ಅವಧಿಯಲ್ಲಿ ರೂಢಿಸಿಕೊಳ್ಳುವ ಆಚಾರ, ವಿಚಾರಗಳನ್ನು ಬದುಕಿನುದ್ದಕ್ಕೂ ನಿರಂತರವಾಗಿ ಪಾಲಿಸಬೇಕು. ಎಂದಿಗೂ ದಾರಿ ತಪ್ಪಬಾರದು ಎಂದು ಹೇಳಿದರು.

ADVERTISEMENT

ಅಯ್ಯಪ್ಪಸ್ವಾಮಿ ದೇವಾಲಯದ ಟಿ.ಎ.ಸುಧೀರ್, ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.