ADVERTISEMENT

ಶಿರಾ: 5ರಂದು ಬಂಜಾರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2023, 6:09 IST
Last Updated 2 ಏಪ್ರಿಲ್ 2023, 6:09 IST
ಶಿರಾದ ಬಂಜಾರ ಭವನದಲ್ಲಿ ಒಳ ಮೀಸಲಾತಿ ಶಿಫಾರಸು ವಿರೋಧಿಸಿ ಬಂಜಾರ ಸಮಾಜದ ಸಭೆ ನಡೆಯಿತು
ಶಿರಾದ ಬಂಜಾರ ಭವನದಲ್ಲಿ ಒಳ ಮೀಸಲಾತಿ ಶಿಫಾರಸು ವಿರೋಧಿಸಿ ಬಂಜಾರ ಸಮಾಜದ ಸಭೆ ನಡೆಯಿತು   

ಶಿರಾ: ಇಲ್ಲಿನ ಬಂಜಾರ ಭವನದಲ್ಲಿ ಲಂಬಾಣಿ ಶ್ರೇಯೋಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಎನ್. ಶೇಷ ನಾಯಕ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ ಲಂಬಾಣಿ ಸಮಾಜದ ಮುಖಂಡರು ಏ. 5ರಂದು ನಗರದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ತೀರ್ಮಾನಿಸಿದರು.

ಶೇಷ ನಾಯಕ್ ಮಾತನಾಡಿ, ಸಂವಿಧಾನದಲ್ಲಿ ಅವಕಾಶವಿಲ್ಲದ ಹಾಗೂ ಸುಪ್ರೀಂ ಕೋರ್ಟ್‌ ತೀರ್ಪಿಗೆ ವಿರುದ್ಧವಾಗಿ ಪರಿಶಿಷ್ಟ ಜಾತಿಗಳನ್ನು ನಾಲ್ಕು ಗುಂಪುಗಳನ್ನಾಗಿ ವರ್ಗೀಕರಿಸಿ ಒಳ ಮೀಸಲಾತಿ ಹಂಚಿಕೆ ಮಾಡಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿರುವುದು ಸರಿಯಲ್ಲ. ಒಳ ಮೀಸಲಾತಿಯಿಂದ ಬಂಜಾರ ಸಮಾಜಕ್ಕೆ ಅನ್ಯಾಯವಾಗುತ್ತಿದೆ. ಇದನ್ನು ಖಂಡಿಸಿ ಶಾಂತಿಯುತ ರೀತಿಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು.

ಸಭೆಯಲ್ಲಿ ಸಮಾಜದ ಮುಖಂಡರಾದ ಮಲ್ಲನಾಯಕ್, ಚಂದ್ರನಾಯಕ್, ಆನಂದ್ ಕುಮಾರ್, ಸತೀಶ್ ಕುಮಾರ್, ಲಕ್ಷ್ಮಣ ನಾಯಕ್, ದೇಶ ನಾಯಕ್, ಮಹೇಶ್ ಕುಮಾರ್, ಶ್ರೀನಿವಾಸ್ ನಾಯಕ್, ಪ್ರವೀಣ್ ನಾಯಕ್, ಕೇಶವ್ ಹಾಜರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.