ಪಾವಗಡ: ತಾಲ್ಲೂಕಿನ ಭೂಪೂರು ತಾಂಡದಲ್ಲಿ ಗುರುವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ವ್ಯಕ್ತಿಯೊಬ್ಬನ ಕೊಲೆಗೆ ಕಾರಣವಾಗಿದೆ.
ಇದೇ ಗ್ರಾಮದ ಗೋಪಾಲನಾಯ್ಕ(40) ಹತ್ಯೆಯಾದವರು. ಮೃತರ ಸಂಬಂಧಿಗಳಾದ ತರುಣ್ ನಾಯ್ಕ, ಹೇಮಂತನಾಯ್ಕ, ಶ್ರೀರಂಗಪುರ ತಾಂಡದ ನಾಗರಾಜನಾಯ್ಕ ಅವರಿಗೆ ತೀವ್ರ ಗಾಯಗಳಾಗಿವೆ.
ಆರೋಪಿ ನಾಗರಾಜನಾಯ್ಕ ಸಹ ಗಾಯಗೊಂಡಿದ್ದಾನೆ
ಗ್ರಾಮದ ಕಟ್ಟೆಯ ಬಳಿ ಕುಳಿತಿದ್ದ ಗೋಪಾಲನಾಯ್ಕ ಸಂಬಂಧಿಕರಿಗೆ ಆರೋಪಿ ನಾಗರಾಜನಾಯ್ಕ್ನ ದ್ವಿಚಕ್ರ ವಾಹನ ತಗುಲಿಸಿದೆ. ಇದೇ ಕಾರಣಕ್ಕೆ ಜಗಳ ನಡೆದಿದೆ. ಗ್ರಾಮಸ್ಥರು ಜಗಳ ಬಿಡಿಸಿ ಕಳುಹಿಸಿದ್ದಾರೆ.
ಆರೋಪಿ ನಾಗರಾಜನಾಯ್ಕ ಮನೆ ಮುಂದೆ ಗೋಪಾಲನಾಯ್ಕ ಹೋಗುತ್ತಿದ್ದಾಗ ಮತ್ತೆ ಜಗಳ ಆರಂಭವಾಗಿದೆ. ಆಗ ನಾಗರಾಜನಾಯ್ಕನು ಗೋಪಾಲನಾಯ್ಕ ಮತ್ತು ಅವರ ಸಂಗಡಿಗರ ಮೇಲೆ ಹಲ್ಲೆ ನಡೆಸಿದ್ದಾನೆ.
ತೀವ್ರವಾಗಿ ಗಾಯಗೊಂಡ ಗೋಪಾಲನಾಯ್ಕ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಪೊಲೀಸರು ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ತಿರುಮಣಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.