ಕೊಡಿಗೇನಹಳ್ಳಿ (ಮಧುಗಿರಿ ತಾ.): ಹೋಬಳಿಯ ಕಡಗತ್ತೂರು ಗ್ರಾಮದ ಹನುಮಂತಪ್ಪ ಎಂಬುವರ ದ್ವಿಚಕ್ರವಾಹನಕ್ಕೆ ದುಷ್ಕರ್ಮಿಗಳು ಬೆಂಕಿ ಇಟ್ಟಿದ್ದು, ಬೈಕ್ ಸುಟ್ಟುಕರಕಲಾಗಿದೆ.
ಹನುಮಂತಪ್ಪ ಅ. 31ರಂದು ರಾತ್ರಿ ಬೈಕ್ ಅನ್ನು ಮನೆಯ ಮುಂದೆ ನಿಲ್ಲಿಸಿ ಮಲಗಿದ್ದಾರೆ. ಬೆಳಗಿನಜಾವ ಟೈರ್ ಸುಟ್ಟಿರುವ ವಾಸನೆ ಬಂದಿದ್ದರಿಂದ ಎಚ್ಚರಗೊಂಡು ಹೊರಗಡೆ ಬಂದು ನೋಡಿದಾಗ ಬೈಕ್ಗೆ ಬೆಂಕಿ ಹಚ್ಚಿರುವುದು ಗೊತ್ತಾಗಿದೆ. ಆಗ ನೆರೆಹೊರೆಯವರು ಬೆಂಕಿ ನಂದಿಸಿದ್ದಾರೆ. ₹ 40 ಸಾವಿರ ನಷ್ಟವಾಗಿದ್ದು ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.