ADVERTISEMENT

ಕೊಡಿಗೇನಹಳ್ಳಿ: ರಸ್ತೆ ಬದಿಯ ಗುಂಡಿಗೆ ಬಿದ್ದು ದ್ವಿಚಕ್ರವಾಹನ ಸವಾರ ಸಾವು

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2023, 6:17 IST
Last Updated 2 ಏಪ್ರಿಲ್ 2023, 6:17 IST
ಪಾವಗಡದಲ್ಲಿ ಶನಿವಾರ ಅನಧಿಕೃತವಾಗಿ ತೆರೆದಿದ್ದ ಮಾಂಸದ ಅಂಗಡಿಯನ್ನು ಪುರಸಭೆ ಸಿಬ್ಬಂದಿ ತೆರವುಗೊಳಿಸಿದರು
ಪಾವಗಡದಲ್ಲಿ ಶನಿವಾರ ಅನಧಿಕೃತವಾಗಿ ತೆರೆದಿದ್ದ ಮಾಂಸದ ಅಂಗಡಿಯನ್ನು ಪುರಸಭೆ ಸಿಬ್ಬಂದಿ ತೆರವುಗೊಳಿಸಿದರು   

ಕೊಡಿಗೇನಹಳ್ಳಿ: ರಸ್ತೆ ಬದಿಯ ಗುಂಡಿಗೆ ಬಿದ್ದು ದ್ವಿಚಕ್ರವಾಹನ ಸವಾರ ಕೆ.ಪಿ. ನರಸಿಂಹಯ್ಯ (42) ಎಂಬುವರು ಸಾವನ್ನಪ್ಪಿರುವ ಘಟನೆ ಕೊಡಿಗೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ನರಸಿಂಹಯ್ಯ ಅವರು ರಾತ್ರಿ ಮೈದನಹಳ್ಳಿಯಲ್ಲಿ ನಡೆಯುತ್ತಿದ್ದ ಹೂವಿನ ತೇರು ನೋಡಲೆಂದು ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದರು. ದೇವರತೋಪು ಬಳಿಯ ರಸ್ತೆಬದಿಯಲ್ಲಿದ್ದ ಗುಂಡಿಗೆ ಬಿದ್ದಿದ್ದಾರೆ.

ಎದೆ ಮತ್ತು ತಲೆಗೆ ತೀವ್ರತರ ಪೆಟ್ಟು ಬಿದ್ದಿದ್ದ ಅವರನ್ನು ತುಮಕೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ADVERTISEMENT

ಕೊಡಿಗೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.