ADVERTISEMENT

19ರಂದು ಪುಸ್ತಕ ಬಿಡುಗಡೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2021, 4:32 IST
Last Updated 15 ಡಿಸೆಂಬರ್ 2021, 4:32 IST

ತಿಪಟೂರು: ನಗರದ ಕಲ್ಪತರು ಸಭಾಂಗಣದಲ್ಲಿ ಡಿ. 19ರಂದು ಪಲ್ಲವ ಪ್ರಕಾಶನ ಹಾಗೂ ಬಿಸಿಲಕೋಲು ಪ್ರಕಾಶನದಿಂದ ಹೊರ ತರುತ್ತಿರುವ ಎಸ್. ಗಂಗಾಧರಯ್ಯ ಅವರ ‘ಮಣ್ಣಿನ ಮುಚ್ಚಳ’ ಮತ್ತು ಸ್ಮಿತಾ ಮಾಕಳ್ಳಿ ಅವರ ‘ಒಂದು ಅಂಕ ಮುಗಿದು’ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಲೇಖಕ ರಹಮತ್ ತರೀಕೆರೆ ಪುಸ್ತಕಗಳನ್ನು ಬಿಡುಗಡೆ ಮಾಡಲಿದ್ದಾರೆ.

ಕಥೆ ಕುರಿತು ಲೇಖಕ ಎಸ್. ನಟರಾಜ ಬೂದಾಳು ಮಾತನಾಡಲಿದ್ದಾರೆ. ಕನ್ನೂಘಟ್ಟದ ಕಾಂತರಾಜು ಮತ್ತು ಸಂಗಡಿಗರುತತ್ವಪದಗಳ ಗಾಯನ ನಡೆಸಿಕೊಡಲಿದ್ದಾರೆ. ಸಾಹಿತ್ಯಾಸಕ್ತರು ಭಾಗವಹಿಸಬೇಕು ಎಂದು ಲೇಖಕ ಎಸ್. ಗಂಗಾಧರಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.