ADVERTISEMENT

ವಾತಾವರಣ ರಕ್ಷಣೆಗೆ ಕಾಳಜಿ ತೋರಿ

ರಾಷ್ಟ್ರೀಯ ಪರಿಸರ ಆವಿಷ್ಕಾರ ಮೇಳಕ್ಕೆ ಪ್ರೊ.ಎಸ್.ಆರ್.ನಿರಂಜನ್‌ ಚಾಲನೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2019, 15:28 IST
Last Updated 29 ಏಪ್ರಿಲ್ 2019, 15:28 IST
ರಾಷ್ಟ್ರೀಯ ಪರಿಸರ ಆವಿಷ್ಕಾರ ಮೇಳದಲ್ಲಿ ವಿದ್ಯಾರ್ಥಿಗಳು ಏರ್ಪಡಿಸಿದ್ದ ವಸ್ತುಪ್ರದರ್ಶನ ಮತ್ತು ಮಾದರಿಗಳ ಕುರಿತು ಪ್ರೊ.ಎಸ್.ಆರ್.ನಿರಂಜನ್‌ ಮಾಹಿತಿ ಪಡೆದರು. ಪ್ರೊ.ಕೆ.ಎನ್‌.ಗಂಗಾನಾಯ್ಕ್‌, ಪ್ರೊ.ಕೆ.ಎಸ್.ಲೋಕೇಶ್ ಇದ್ದಾರೆ
ರಾಷ್ಟ್ರೀಯ ಪರಿಸರ ಆವಿಷ್ಕಾರ ಮೇಳದಲ್ಲಿ ವಿದ್ಯಾರ್ಥಿಗಳು ಏರ್ಪಡಿಸಿದ್ದ ವಸ್ತುಪ್ರದರ್ಶನ ಮತ್ತು ಮಾದರಿಗಳ ಕುರಿತು ಪ್ರೊ.ಎಸ್.ಆರ್.ನಿರಂಜನ್‌ ಮಾಹಿತಿ ಪಡೆದರು. ಪ್ರೊ.ಕೆ.ಎನ್‌.ಗಂಗಾನಾಯ್ಕ್‌, ಪ್ರೊ.ಕೆ.ಎಸ್.ಲೋಕೇಶ್ ಇದ್ದಾರೆ   

ತುಮಕೂರು: ಯುವಜನರು ಸೇರಿದಂತೆ ಸಮಾಜದ ಪ್ರತಿಯೊಬ್ಬರೂ ಕಾಳಜಿಯಿಂದ ವಾತಾವರಣವನ್ನು ರಕ್ಷಿಸುವ ಜವಾಬ್ದಾರಿ ಹೊಂದಬೇಕು. ಮುಂದಿನ ಪೀಳಿಗೆಗೆ ಪೌಷ್ಟಿಕ ಆಹಾರ, ನೀರು ಹಾಗೂ ಪರಿಸರವನ್ನು ಕೊಡುಗೆಯಾಗಿ ನೀಡಬೇಕು ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ಆರ್.ನಿರಂಜನ್‌ ಸಲಹೆ ನೀಡಿದರು.

ತುಮಕೂರು ವಿಶ್ವವಿದ್ಯಾನಿಲಯಲ್ಲಿ ಸ್ನಾತಕೋತ್ತರ ಪರಿಸರ ವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ವಿಭಾಗದಿಂದ ಆಯೋಜಿಸಿರುವ ರಾಷ್ಟ್ರೀಯ ಪರಿಸರ ಆವಿಷ್ಕಾರ ಮೇಳಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಸಮಕಾಲಿನ ಪರಿಸರ ಸಮಸ್ಯೆಗಳಿಗೆ ಮತ್ತು ಸವಾಲುಗಳಿಗೆ ಉತ್ತರವನ್ನು ಹುಡುಕಬೇಕು. ಸಂಶೋಧನೆಯ ಮಾರ್ಗಗಳನ್ನು ವಿಸ್ತರಿಸಿಕೊಂಡು ಸಮಾಜಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು’ ಎಂದರು.

ADVERTISEMENT

ಜೆಎಸ್ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಕೆ.ಎಸ್. ಲೋಕೇಶ್ ಮಾತನಾಡಿ, ‘ತುಮಕೂರು ವಿವಿ ಇತ್ತೀಚೆಗೆ ಹಲವು ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಪರಿಸರ ಮಾಲಿನ್ಯ ಕುರಿತು ಅಂತರರಾಷ್ಟ್ರೀಯ ಮಟ್ಟದಲ್ಲಿ ಜಾಗೃತಿ ಮೂಡಿಸಬೇಕಾಗಿದೆ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ತುಮಕೂರು ವಿವಿಯ ಕುಲಸಚಿವ ಪ್ರೊ.ಕೆ.ಎನ್‌.ಗಂಗಾನಾಯ್ಕ್‌, ಪರಿಸರ ಸಂರಕ್ಷಣೆಯನ್ನು ಎಲ್ಲ ಯುವಜನರು ನೈತಿಕ ಕರ್ತವ್ಯ ಎಂದು ಭಾವಿಸಬೇಕು. ವಿನೂತನ ಆವಿಷ್ಕಾರ ಮತ್ತು ಪ್ರಯೋಗಾತ್ಮಕ ಚಿಂತನೆಗಳ ಮೂಲಕ ಪರಿಸರವನ್ನು ಉಳಿಸಿ ಬೆಳೆಸಬೇಕು’ ಎಂದು ಸಲಹೆ ನೀಡಿದರು.

ಕಾರ್ಯಾಗಾರದ ಸಂಚಾಲಕರಾದ ಡಾ.ರಾಜನಾಯ್ಕ್ ಹಾಗೂ ಡಾ.ಶರತ್‌ಚಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.