ADVERTISEMENT

ಹತ್ಯೆಗೆ ಸಂಚು: ಅಪಾಯದಿಂದ ಪಾರಾದ ಉದ್ಯಮಿ

​ಪ್ರಜಾವಾಣಿ ವಾರ್ತೆ
Published 30 ಜುಲೈ 2020, 4:24 IST
Last Updated 30 ಜುಲೈ 2020, 4:24 IST
ಪ್ರಾಣಾಯಾಮದಿಂದ ಪಾರಾದ ಉದ್ಯಮಿ ಬಿ.ಎನ್.ನಾಗಾರ್ಜುನ ಭಾವಚಿತ್ರ
ಪ್ರಾಣಾಯಾಮದಿಂದ ಪಾರಾದ ಉದ್ಯಮಿ ಬಿ.ಎನ್.ನಾಗಾರ್ಜುನ ಭಾವಚಿತ್ರ   

ಮಧುಗಿರಿ: ಎರಡು ದ್ವಿಚಕ್ರ ವಾಹನದಲ್ಲಿ ಬಂದ ಅಪರಿಚಿತ ಯುವಕರ ಗುಂಪೊಂದು ರಿಯಲ್ ಎಸ್ಟೇಟ್ ಉದ್ಯಮಿ ಬಿ.ಎನ್.ನಾಗಾರ್ಜುನ ಮೇಲೆ ಮಾರಕಾಸ್ತ್ರಗಳಿಂದ ಹತ್ಯೆ ಮಾಡಲು ಯತ್ನಿಸಿರುವ ಘಟನೆ ಮಂಗಳವಾರ ನಡೆದಿದೆ.

ತಾಲ್ಲೂಕಿನ ಕಸಬಾ ವ್ಯಾಪ್ತಿಯ ಮರುವೇಕೆರೆ ಗ್ರಾಮದ ನಿವಾಸಿ ತುಮುಲ್ ಮಾಜಿ ಅಧ್ಯಕ್ಷ ಬಿ.ನಾಗೇಶ್ ಬಾಬು ಅವರ ಅಣ್ಣನ ಮಗನಾದ ನಾಗರ್ಜುನ ಪಟ್ಟಣದ ಎಪಿಎಂಸಿ ಹಿಂಭಾಗದಲ್ಲಿರುವ ಮನೆಗೆ ಕಾರಿನಲ್ಲಿ ತೆರುಳುತ್ತಿದ್ದಾಗ 4 ಮಂದಿ ಅಪರಿಚಿತ ಯುವಕರು ಕಾರನ್ನು ಹಿಂಬಾಲಿಸಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲು ಮುಂದಾಗಿದ್ದಾರೆ. ತಕ್ಷಣ ನಾಗಾರ್ಜುನ ಕಾರನ್ನು ವೇಗವಾಗಿ ಓಡಿಸಿಕೊಂಡು ಹೋಗಿ ಪ್ರಾಣಪಾಯದಿಂದ ಪಾರಾಗಿದ್ದಾರೆ.

ಮಧುಗಿರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.