ತುಮಕೂರು: ‘ಹೋರಾಟದ ಹಾಡುಗಳಿಂದ ಏನನ್ನು ಕಲಿಯ ಬಹುದು’ ಎಂಬ ವಿಷಯದ ಕುರಿತು ಮಂಗಳವಾರ ಸಂವಾದ ನಡೆಯಲಿದೆ.
ಓದು ವಿದ್ಯಾರ್ಥಿ ಬಳಗದ ಮೂರನೇ ಸಂಚಿಕೆಯ ಕಾರ್ಯಕ್ರಮವಾಗಿ ಈ ಸಂವಾದ ಆಯೋಜಿಸಲಾಗಿದೆ. ಸಂಜೆ 4.30ಕ್ಕೆ ಜೂಮ್ ಮೀಟ್ ಆ್ಯಪ್ ಮೂಲಕ ಆನ್ಲೈನ್ನಲ್ಲಿ ಸಂವಾದ ನಡೆಯಲಿದೆ.
ಕುಪ್ಪಳಿಯ ಕುವೆಂಪು ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಬಿ.ಎಂ. ಪುಟ್ಟಯ್ಯ ಅವರು ಸಂವಾದಕ್ಕೆ ಚಾಲನೆ ನೀಡಲಿದ್ದಾರೆ. ತಿಪಟೂರು ಯುವಕವಿ ಎಸ್.ಕೆ. ಮಂಜುನಾಥ, ತುಮಕೂರು ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿ ಧನುಷ್ ಎಚ್. ಶೇಖರ್ ಸಂವಾದಕ್ಕೆ ಪ್ರತಿಕ್ರಿಯೆ ನೀಡಲಿದ್ದಾರೆ. ಬಳಗದ ಸಂಚಾಲಕ ನಾಗಭೂಷಣ ಬಗ್ಗನಡು ಉಪಸ್ಥಿತರಿರುವರು.
ಮೀಟಿಂಗ್ ಐಡಿ: 9892827118, ಪಾಸ್ವರ್ಡ್: 2JELyg ಅಥವಾ https://us05web.zoom.us/j/9892827118?pwd=KzBxbVdaTDgwSVdJUW1ONU8zS3NCUT09 ಲಿಂಕ್ ಮೂಲಕ ಸಂವಾದದಲ್ಲಿ ಪಾಲ್ಗೊಳ್ಳಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.