ಕುಣಿಗಲ್: ಪಟ್ಟಣದ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಕಳುವಿಗೆ ಯತ್ನಿಸಿದ ಕಳ್ಳನನ್ನು ನಾಗರಿಕರು ಹಿಡಿದು ಥಳಿಸಿ ಪೊಲೀಸರ ವಶಕ್ಕೆ ನೀಡಿದ್ದರು. ಠಾಣೆಯಲ್ಲಿದ್ದ ಆ ಕಳ್ಳ ನೀರು ಕುಡಿಯುವ ನೆಪದಲ್ಲಿ ಠಾಣೆಯಿಂದ ಓಡಿಹೋಗಿದ್ದು, ಪೊಲೀಸರು ಆತನನ್ನು ಮತ್ತೆ ಹಿಡಿದಿದ್ದಾರೆ.
ಪಟ್ಟಣದ ಕೋಲ್ಲಾಪುರದಮ್ಮ ಕಲ್ಯಾಣ ಮಂಟಪದಲ್ಲಿ ಅಡುಗೆ ಭಟ್ಟರ ಮೊಬೈಲ್ ಸೇರಿದಂತೆ ಇತರೆ ವಸ್ತುಗಳನ್ನು ಕಳವು ಮಾಡುತ್ತಿದ್ದಾಗ ನಾಗರಿಕರು ಹಿಡಿದಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.