ADVERTISEMENT

ವರದಕ್ಷಿಣೆ ಕಿರುಕುಳ ಆರೋಪ; ಮಗುವಿಗೆ ವಿಷ ಉಣಿಸಿ ಮಹಿಳೆ ಸಾವು

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2019, 16:49 IST
Last Updated 24 ಏಪ್ರಿಲ್ 2019, 16:49 IST

ತುಮಕೂರು: ತಾಲ್ಲೂಕಿನ ಹೆಬ್ಬೂರು ಹೋಬಳಿ ಮಾರನಹಟ್ಟಿ ಗ್ರಾಮದಲ್ಲಿ ಸೋಮವಾರ ಗಂಡ ಮತ್ತು ಗಂಡನ ಮನೆಯವರು ವರದಕ್ಷಿಣೆಗೆ ನೀಡಿದ ಕಿರಕುಳ ತಾಳದೇ ಮೂರು ವರ್ಷದ ಗಂಡು ಮಗುವಿಗೆ ವಿಷ ಉಣಿಸಿ ತಾನೂ ವಿಷ ಸೇವಿಸಿ ಮಹಿಳೆ ಮೃತಪಟ್ಟಿದ್ದಾಳೆ.

ಡಿ.ರಾಧಾ ಹಾಗೂ ರಿತೇಶ್(3) ಮೃತಪಟ್ಟವರು.

ಪ್ರಕರಣ ಹಿನ್ನೆಲೆ: ಡಿ.ರಾಧಾ ಅವರನ್ನು ಅದೇ ಗ್ರಾಮದ ನಾಗರಾಜು ಅವರೊಂದಿಗೆ ನಾಲ್ಕು ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಮೂರು ವರ್ಷದ ಗಂಡು ಮಗನಿದ್ದ. ಮಾರನಹಟ್ಟಿಯಲ್ಲೇ ನಾವು ಕಟ್ಟಿಸಿಕೊಟ್ಟ (ತವರು ಮನೆಯರು) ಮನೆಯಲ್ಲಿ ದಂಪತಿ ವಾಸವಿದ್ದರು. ರಾಧಾಳಿಗೆ ಗಂಡ, ಅತ್ತೆ, ಮಾವ, ಭಾವ, ಮೈದುನ ಸೇರಿ ಮನೆಯವರೆಲ್ಲ ಏ.22ರಂದು ಕಿರುಕುಳ ನೀಡಿದ್ದರು. ಕಿರುಕುಳ ತಾಳದೇ ತಮ್ಮ ತಂಗಿ ಮಗನಿಗೆ ವಿಷ ಉಣಿಸಿ ತಾನೂ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ರಾಧಾಳ ಸಹೋದರ ಬಸವರಾಜು ಮಹಿಳಾ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.