ADVERTISEMENT

ತುಮಕೂರು: ತಂದೆಯಿಂದ ಮಗಳ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 12 ಮೇ 2020, 16:55 IST
Last Updated 12 ಮೇ 2020, 16:55 IST
ಕುಣಿಗಲ್ ತಾಲ್ಲೂಕಿನ ಖಾಸಗಿ ಕಾರ್ಖಾನೆಗೆ ಅನಧಿಕೃತವಾಗಿ ಕಾರ್ಮಿಕರನ್ನು ಸಾಗಿಸುತ್ತಿದ್ದ ಮೂರು ಬಸ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ
ಕುಣಿಗಲ್ ತಾಲ್ಲೂಕಿನ ಖಾಸಗಿ ಕಾರ್ಖಾನೆಗೆ ಅನಧಿಕೃತವಾಗಿ ಕಾರ್ಮಿಕರನ್ನು ಸಾಗಿಸುತ್ತಿದ್ದ ಮೂರು ಬಸ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ   

ತಿಪಟೂರು: ಆಸ್ತಿ ವಿಚಾರಕ್ಕಾಗಿ ತಂದೆಯೇ ನನ್ನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ನೊಣವಿನಕೆರೆ ಹೋಬಳಿಯ ಗೋಪಾಲಪುರ ಗ್ರಾಮದ ಅಮೃತಾ ಎಂಬಾಕೆ ನೊಣವಿನಕೆರೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಗೋಪಾಲಪುರದ ಭೈರಪ್ಪ ಮತ್ತು ಮಗಳು ಅಮೃತಾ ಅವರಿಗೂ ಜಮೀನಿನ ವಿಚಾರವಾಗಿ ಸೋಮವಾರ ತಡರಾತ್ರಿ ಜಗಳ ನಡೆದಿದೆ. ಈ ಸಮಯದಲ್ಲಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಅಮೃತಾ 6 ವರ್ಷದ ಹಿಂದೆ ಮದುವೆಯಾಗಿ ಬೆಂಗಳೂರಿನಲ್ಲಿ ವಾಸವಿದ್ದರು. ಲಾಕ್‍ಡೌನ್‍ನಿಂದಾಗಿ ಊರಿಗೆ ಬಂದಿದ್ದರು. ಈ ನಡುವೆ ಭೈರಪ್ಪ ಜಮೀನಿನ ಮಣ್ಣು ತೆಗೆಸಿ ಬೇರೆಯವರಿಗೆ ಮಾರಾಟ ಮಾಡಿದ್ದನ್ನು ಅಮೃತ ಪ್ರಶ್ನಿಸಿದ್ದಾರೆ. ಈ ವಿಚಾರವಾಗಿ ತಂದೆ– ಮಗಳ ನಡುವೆ ಗಲಾಟೆ ನಡೆದಿದೆ.
ಮಾತಿಗೆ ಮಾತು ಬೆಳೆದು ಜಗಳ ಅತಿರೇಕಕ್ಕೆ ಹೋಗಿ ಹಲ್ಲೆ ನಡೆಸಿದರು ಎಂದು ದೂರಿನಲ್ಲಿ ವಿವರಿಸಿದ್ದಾರೆ.

ADVERTISEMENT

ಅಮೃತ ಮತ್ತು ಅವರ ಪತಿ ಸುನೀಲ್‍ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.