ADVERTISEMENT

ಹಾವು ಕಡಿತದಿಂದ ರೈತ ಸಂಘದ ರಾಜ್ಯ ಕಾರ್ಯದರ್ಶಿ ಸಾವು

​ಪ್ರಜಾವಾಣಿ ವಾರ್ತೆ
Published 5 ಜುಲೈ 2020, 16:58 IST
Last Updated 5 ಜುಲೈ 2020, 16:58 IST
ಬಿ.ಎಸ್.ದೇವರಾಜು
ಬಿ.ಎಸ್.ದೇವರಾಜು   

ತಿಪಟೂರು: ತಾಲ್ಲೂಕಿನ ‌ಬೆನ್ನಾಯಕನಹಳ್ಳಿ ಗ್ರಾಮದ ರಾಜ್ಯ ರೈತ ಸಂಘದ ಕಾರ್ಯದರ್ಶಿ ಬಿ.ಎಸ್.ದೇವರಾಜು ಮನೆಯ ಬಳಿಯಲ್ಲಿ ಹಾವು ಕಚ್ಚಿ ಮೃತಪಟ್ಟಿರುವ ಘಟನೆ‌ ನಡೆದಿದೆ.

ಹಲವು ದಶಕಗಳ ಕಾಲದಿಂದಲೂ ರೈತರ ಸಮಸ್ಯೆಗಳನ್ನು ಪರಿಹರಿಸಲು ಹೋರಟ ನಡೆಸುತ್ತಾ ಬಂದಿದ್ದರು. ಗ್ರಾಮ ಮಟ್ಟಗಳಲ್ಲಿ ರೈತ ಸಂಘದ ಸಂಘಟಿಸುವಲ್ಲಿ ಯಶಸ್ವಿಯಾಗಿದ್ದರು.

ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ. ಮೃತರ ಅಂತ್ಯಕ್ರಿಯೆಯು ಗ್ರಾಮದ ತೋಟದಲ್ಲಿ ಸೋಮವಾರ ನಡೆಯಲಿದೆ ಎಂದು ಕುಟುಂಬದ‌ ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.