ಪಟ್ಟನಾಯಕನಹಳ್ಳಿ: ಶಿರಾ ತಾಲ್ಲೂಕಿನ ಪೂಜಾರ್ ಮುದ್ದನಹಳ್ಳಿಯಲ್ಲಿ ಜಿಂಕೆ ಬೇಟೆಗೆ ಪ್ರಯತ್ನಿಸುತ್ತಿದ್ದ ಆರು ಜನರನ್ನು ಪಟ್ಟನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ ಬಂದೂಕು, 5 ಗುಂಡು, ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳಾದ ನವೀನ್, ಕಿರಣ್, ರಾಜೀವ್, ರಿಹಾನ್ ಶ್ರೀಧರ್, ಶುಜಾತ್ ಅವರು ಗುಬ್ಬಿ ಮತ್ತು ತುಮಕೂರಿನವರು.
ಡಿವೈಎಸ್ಪಿ ಕುಮಾರಪ್ಪ ಮತ್ತು ಶಿರಾ ಗ್ರಾಮಾಂತರ ಸರ್ಕಲ್ ಇನ್ಸ್ಪೆಕ್ಟರ್ ಹನುಮಂತರಾಯ ಮಾರ್ಗದರ್ಶನದಲ್ಲಿ ಪಿಎಸ್ಐ ಧ್ರುವಚಾರ್, ಎಸ್ಎಂ ಕೃಷ್ಣ , ಹೆಡ್ಕಾನ್ಸ್ಟೆಬಲ್ ಶ್ರೀನಿವಾಸ್, ಕಾನ್ಸ್ಟೆಬಲ್ ಜಗದೀಶ್ ಹನುಮಂತಾಚಾರ್, ನಾಗರಾಜು, ಯತೀಶ್, ರೇವಣ್ಣ ಸುನೀಲ್ ಕುಮಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.