ತಿಪಟೂರು: ‘ನಗರಸಭೆಯಿಂದ ದಿನನಿತ್ಯ ಕಸ ಸಂಗ್ರಹಕ್ಕೆ ಬರುವ ವಾಹನಗಳಿಗೆ ಯಾರು ಹಣ ಕೊಡಬೇಕಿಲ್ಲ. ಹಾಗೇನಾದರು ಕೇಳಿದರೆ ನಮ್ಮ ಗಮನಕ್ಕೆ ತನ್ನಿ’ ಎಂದು ನಗರಸಭಾ ಅಧ್ಯಕ್ಷ ಪಿ.ಜೆ. ರಾಮ್ಮೋಹನ್ ತಿಳಿಸಿದರು.
ನಗರಸಭೆಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
‘ಸಾರ್ವಜನಿಕರು ನಗರಸಭೆಯಿಂದ ಕಸ ಸಂಗ್ರಹಿಸುವುದಕ್ಕೆ ಕಂದಾಯದ ಜೊತೆಯೇ ದುಡ್ಡು ಕಟ್ಟುತ್ತಿದ್ದಾರೆ. ಕಸ ಸಂಗ್ರಹಿಸುವ ವಾಹನದವರು ಹಣ ಕೇಳಿದರೆ ಕೊಡಬೇಡಿ ಹಾಗೂ ಕಸ ಹಾಕಿಸಿಕೊಳ್ಳಲು ಹಣವನ್ನು ಕೊಡಲೇಬೇಕು ಎಂದು ಕೇಳಿದರೆ ಅಧಿಕಾರಿಗಳ ಗಮನಕ್ಕೆ ಅಥವಾ ನಗರಸಭಾ ಸದಸ್ಯರ ಗಮನಕ್ಕೆ ತರಬೇಕು’ ಎಂದು ತಿಳಿಸಿದರು.
ಮೋಟಾರ್ಗೆ ಹಣವಿಲ್ಲ: ‘ನಗರಸಭೆಯಿಂದ ನಗರದ ಮೂಲೆ ಮೂಲೆಗಳಲ್ಲಿ ಬೋರ್ವೆಲ್ಗಳನ್ನು ಕೊರೆದು ಬಿಟ್ಟಿದ್ದಾರೆ. ಆದರೆ, ಚೆನ್ನಾಗಿ ನೀರು ಬಂದಿರುವ ಬೋರ್ವೆಲ್ಗಳಿಗೆ ಮೋಟರ್ ಬಿಡಲು ನಗರಸಭೆಯಲ್ಲಿ ಹಣವಿಲ್ಲದಿರುವುದು ವಿಪರ್ಯಾಸ’ ಎಂದು ಸರ್ವ ಸದಸ್ಯರು ಆರೋಪಿಸಿದರು.
ಸಭೆಯಲ್ಲಿ ನಗರಸಭೆಯ ಪೌರಾಯುಕ್ತ ಉಮಾಕಾಂತ್, ಉಪಾಧ್ಯಕ್ಷ ಸೊಪ್ಪುಗಣೇಶ್, ಎಇಇ ನಾಗೇಶ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.