ADVERTISEMENT

ಕೌಶಲ ಜ್ಞಾನ ವೃದ್ಧಿಸಿಕೊಳ್ಳಿ

ನಗರದ ಶ್ರೀದೇವಿ ಕಾಲೇಜಿನಲ್ಲಿ ನಡೆದ ಕಾರ್ಯಾಗಾರದಲ್ಲಿ ಸರಗೂರ್ ನರಸಿಂಹನ್ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2019, 12:07 IST
Last Updated 24 ಏಪ್ರಿಲ್ 2019, 12:07 IST
ಕಾರ್ಯಾಗಾರಕ್ಕೆ ಸರಗೂರ್ ನರಸಿಂಹನ್ ಚಾಲನೆ ನೀಡಿದರು. ಡಾ.ಟಿ.ಹೇಮಾದ್ರಿನಾಯ್ಡು, ಪ್ರೊ.ಸಿ.ವಿ.ಷಣ್ಮುಖಸ್ವಾಮಿ ಹಾಗೂ ಸಂಯೋಜಕ ಪ್ರೊ.ಎಂ.ಎಸ್.ಚೇತನ್ ಇದ್ದಾರೆ
ಕಾರ್ಯಾಗಾರಕ್ಕೆ ಸರಗೂರ್ ನರಸಿಂಹನ್ ಚಾಲನೆ ನೀಡಿದರು. ಡಾ.ಟಿ.ಹೇಮಾದ್ರಿನಾಯ್ಡು, ಪ್ರೊ.ಸಿ.ವಿ.ಷಣ್ಮುಖಸ್ವಾಮಿ ಹಾಗೂ ಸಂಯೋಜಕ ಪ್ರೊ.ಎಂ.ಎಸ್.ಚೇತನ್ ಇದ್ದಾರೆ   

ತುಮಕೂರು: ಶಿಕ್ಷಣ ಜೊತೆಗೆ ಇಂದು ಕಂಪ್ಯೂಟರ್‌ ಜ್ಞಾನ ಅತ್ಯವಶ್ಯಕವಾಗಿದ್ದು, ಮುಂದೆ ತಂತ್ರಜ್ಞಾನ ಮತ್ತು ಮಾಹಿತಿ ಎಲ್ಲರಿಗೂ ಅನಿವಾರ್ಯವಾಗುತ್ತದೆ ಎಂದು ಮೈಸೂರು ಸರೋಜಾ ಎಂಟರ್‌ಪ್ರೈಸ್ ಮುಖ್ಯಸ್ಥ ಸರಗೂರ್ ನರಸಿಂಹನ್ ಅಭಿಪ್ರಾಯಪಟ್ಟರು.

ನಗರದ ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕಂಪ್ಯೂಟರ್‌ ಸೈನ್ಸ್‌ ವಿಭಾಗ ಹಾಗೂ ಬೈಟ್ಸ್ ಮತ್ತು ಸಿಎಸ್‌ಐ ಸಹಯೋಗದೊಂದಿಗೆ ಆಯೋಜಿಸಿದ್ದ ಎಂಬೆಡೆಡ್‌ ಸಿಸ್ಟಮ್ಸ್‌ ಐಒಟಿ ಎಂಬ ಮೂರು ದಿನದ ಕಾರ್ಯಾಗಾರಕ್ಕೆ ಚಾಲನೆ ನೀಡಿದರು.

ದೇಶದ ಅಭಿವೃದ್ಧಿಯಲ್ಲಿ ಕಂಪ್ಯೂಟರ್ ಎಂಜಿನಿಯರಿಂಗ್ ಪಾತ್ರವು ಬಹಳ ಮಹತ್ವದ್ದಾಗಿದೆ. ಹಾಗೇ ಎಂಬೆಡೆಡ್ ಸಿಸ್ಟಮ್ಸ್‌ಗಳು ತಂತ್ರಜ್ಞಾನದಲ್ಲಿ ಅತ್ಯಂತ ಬೇಡಿಕೆ ಇದ್ದು ಈ ಕಾರ್ಯಾಗಾರದಲ್ಲಿ ಹೆಚ್ಚಿನ ಪ್ರಯೋಜನವಾಗಲಿದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಶ್ರೀದೇವಿ ಕಾಲೇಜಿನ ಪ್ರಾಂಶುಪಾಲ ಡಾ.ಟಿ.ಹೇಮಾದ್ರಿನಾಯ್ಡು ಅವರು, ‘ಕಾಲೇಜಿನಲ್ಲಿ ಮಾಡುವ ಪ್ರಾಜೆಕ್ಟ್‌ಗಳಿಂದ ಮುಂದೆ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗ ಅವಕಾಶ ದೊರೆಯಲಿದೆ’ ಎಂದು ಹೇಳಿದರು.

ವಿದ್ಯಾರ್ಥಿಗಳು ಹೊಸ ತಂತ್ರಜ್ಞಾನದ ಸೃಜನಶೀಲತೆ ಹೊಂದಿದ್ದು, ಸ್ಟಾರ್ಟ್‌ಅಪ್‌ ಕಂಪನಿಗಳನ್ನು ಸ್ಥಾಪಿಸಲು ಇಚ್ಛಿಸಿದಲ್ಲಿ ಸಂಸ್ಥೆಯು ಆವಿಷ್ಕಾರ ಕೇಂದ್ರದ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳಬಹುದು ಎಂದು ತಿಳಿಸಿದರು.

ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಪ್ರೊ.ಸಿ.ವಿ.ಷಣ್ಮುಖಸ್ವಾಮಿ ಮಾತನಾಡಿ, ‘ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಯುಗದಲ್ಲಿ ಹೆಚ್ಚಿನ ರೀತಿಯಲ್ಲಿ ವಿದ್ಯಾಭ್ಯಾಸ ಮಾಡಿದಲ್ಲಿ ಯಶಸ್ಸು ಸಾಧಿಸಲಾರರು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.