ADVERTISEMENT

ಮಾಜಿ ಕಾರ್ಪೊರೇಟರ್ ರವಿಕುಮಾರ ಕೊಲೆ ಪ್ರಕರಣ: ಆರೋಪಿಯ ಬಂಧನ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2018, 5:42 IST
Last Updated 30 ಅಕ್ಟೋಬರ್ 2018, 5:42 IST
   

ತುಮಕೂರು: ನಗರದ ಮಾಜಿ ಕಾರ್ಪೊರೇಟರ್ ರವಿಕುಮಾರ ಅವರ ಕೂಲೆ ಪ್ರಕರಣದ ಆರೋಪಿ ಮಧುಗಿರಿ ಮಲ್ಲೇಶ ಎಂಬುವನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಆರೋಪಿ ಮಲ್ಲೇಶನ ಕಾಲಿಗೆ ಗುಂಡೇಟು ಬಿದ್ದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಂಧ್ರದ ಬಸ್ ನಿಲ್ಲಾಣದಲ್ಲಿ ಬಂಧಿಸಿ, ಮಧುಗಿರಿ ಮಾರ್ಗವಾಗಿ ತುಮಕೂರಿಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಆಗ ಆತ ಮಾರ್ಗಮಧ್ಯೆ ಬೆಳದರ ಹೈವೇ ರಸ್ತೆಯ ಬಳಿ ಬಹಿರ್ದಸೆಗೆ ಹೋದ ವೇಳೆ ಏಕಾಏಕಿ ಕೈಗೆ ಹಾಕಿದ್ದ ಲೀಡಿಂಗ್ ಚೈನ್‌ನಿಂದ ಬೆಂಗಾವಲಿಗಿದ್ದ ಮುಖ್ಯ ಪೇದೆ ಸೈಮನ್ ವಿಕ್ಟರ್‌ ಅವರ ಕುತ್ತಿಗೆಗೆ ಬಲವಾಗಿ ಬಿಗಿದು, ತಳ್ಳಿ ತಪ್ಪಿಸಿಕೂಂಡು ಹೋಗಲು ಪ್ರಯತ್ನಿಸಿದನು.

ADVERTISEMENT

ಆಗ ಪತ್ತೆ ತಂಡದ ಅಧಿಕಾರಿಗಳಾದ ಇನ್ಸ್ಪೆಕ್ಟರ್ ರಾಮಕೃಷ್ಣಯ್ಯ, ರಾಘವೇಂದ್ರ ಹಾಗೂ ಸಿಬ್ಬಂದಿ ಮೋಹನ್ ಆರೋಪಿಯ ಕಾಲುಗಳಿಗೆ ಗುಂಡು ಹಾರಿಸಿ ಆರೋಪಿಯನ್ನು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.