ADVERTISEMENT

ನವಜಾತ ಶಿಶುವಿಗೆ ಬೆಂಕಿ ಹಚ್ಚಿ ಕೊಲೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2019, 16:05 IST
Last Updated 23 ಆಗಸ್ಟ್ 2019, 16:05 IST

ತುಮಕೂರು: ನಗರದ ಮುನೇಶ್ವರ ಬಡಾವಣೆಯ ಶಾಂತಿನಗರ ಕೆರೆಕಟ್ಟೆಯ ಏರಿಯ ಮೇಲೆ ನವಜಾತ ಹೆಣ್ಣು ಶಿಶುವಿಗೆ ಬೆಂಕಿ ಹಚ್ಚಿ ಸಾಯಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಆಗಸ್ಟ್ 19ರಂದು ಸಂಜೆ ಈ ಘಟನೆ ನಡೆದಿದೆ. ಯಾರೋ ಹೆಣ್ಣು ಮಗುವಿನ ಜನನ ಮರೆಮಾಚಲು ಕೆರೆ ಏರಿಯ ಮೇಲೆ ಮಗುವನ್ನು ಸಾಯಿಸಿ ಬೆಂಕಿ ಹಚ್ಚಿ ಹೋಗಿದ್ದಾರೆ. ಸಂಬಂಧಪಟ್ಟ ಪೋಷಕರನ್ನ ಪತ್ತೆ ಮಾಡಿ ಕ್ರಮ ಜರುಗಿಸಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಿಳಾ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT